ಶ್ರೀರಂಗಂನಲ್ಲಿರುವ ಸಮಯಪುರಂ ಮಾರಿಯಮ್ಮನ್ ದೇವಸ್ಥಾನ ತಿರುಚಿರಾಪಳ್ಳಿ ಜಿಲ್ಲೆಯ ಭಾಗದಲ್ಲಿದೆ. ಪ್ರತಿದಿನ ಸಮಯಪುರಂ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಅದರಲ್ಲೂ ರವಿವಾರ, ಮಂಗಳವಾರ ಮತ್ತು ಶುಕ್ರವಾರಗಳಂದು ಇಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ಕೈಗೊಳ್ಳುವುದರಿಂದ ಭಕ್ತರ ಸಂಖ್ಯೆ ಮಿತಿಮೀರಿರುತ್ತದೆ. ಅಕ್ಕಿ ಹಿಟ್ಟು, ತುಪ್ಪ, ಬೇಳೆ ಮತ್ತು ಬೆಲ್ಲವನ್ನು ಬಳಸಿ ವಿಶೇಷವಾದ ನೈವೇದ್ಯದ ಖಾದ್ಯವನ್ನು ಮಾಡಲಾಗುತ್ತದೆ. ನೈವೇದ್ಯದ ಸಿಹಿಗೆ ಮಾವಿಲಕ್ಕುಮಾವು ಎನ್ನಲಾಗುತ್ತದೆ. ಜನರ ನಂಬಿಕೆಯ ಪ್ರಕಾರ, ಇದು ದೇವರಿಗೆ ಅತ್ಯಂತ ಪ್ರಿಯ.
ದೇವಸ್ಥಾನಕ್ಕೆ ಧಾರ್ಮಿಕ ಮಹತ್ವವಿದ್ದು, ಸ್ಥಳೀಯರು ಇದನ್ನು ಯಾವ ತೀರ್ಥಕ್ಷೇತ್ರಕ್ಕೂ ಕಡಿಮೆಯಿಲ್ಲವೆಂದು ಭಾವಿಸುತ್ತಾರೆ. ರಥೋತ್ಸವವನ್ನು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹಾಗು ಹೂವುಗಳ ಮೇಳವನ್ನು ಫೇಬ್ರವರಿಯಿಂದ ಮಾರ್ಚ್ ತಿಂಗಳಲ್ಲಿ ಇಲ್ಲಿ ಆಯೋಜಿಸಲಾಗುತ್ತದೆ.