ಪ್ರವಾಸಿಗರು ಸೊಂದಾ ಪ್ರವಾಸದಲ್ಲಿದ್ದಾಗ ಮುತ್ತಿನಕೆರೆ ಪಕ್ಷಿ ಧಾಮದ ಹತ್ತಿರವಿರುವ ಮುತ್ತಿನಕೆರೆ ವೆಂಕಟರಮಣ ದೇವಾಲಯಕ್ಕೂ ಭೇಟಿ ನೀಡಬಹುದಾಗಿದೆ.ಈ ಚಿಕ್ಕ ದೇವಾಲಯವು ೧೭ ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪವನ್ನು ಬಿಂಬಿಸುತ್ತದೆ.
ಸೊಂದಾಗೆ ಭೇಟಿ ಕೊಡುವ ಪ್ರವಾಸಿಗರು ಶಿವಗಂಗಾ ಜಲಪಾತಕ್ಕೆ ತಪ್ಪದೆ ಭೇಟಿಕೊಡಬೇಕು. ಈ ಜಲಪಾತವು ಶಾಲ್ಮಲಾ ನದಿಯಿಂದ ಉಗಮವಾಗುತ್ತದೆ. ಇದು 74 ಮೀಟರ್ ಎತ್ತರದಿಂದ ನೇರವಾಗಿ ದಟ್ಟವಾಗಿ ಬೆಳೆದಿರುವ ಒಂದು ಕಾಡಿನ ಕಣಿವೆಗೆ ಧುಮುಕುತ್ತದೆ. ಈ ಜಲಪಾತದ ಬಳಿಯಲ್ಲಿ ಒಂದು ದ್ವೀಪವಿದ್ದು, ಅದನ್ನು ಗಣೇಶ್ಪಲ್ ಎಂದು ಕರೆಯುತ್ತಾರೆ....
ಹುಣಸೆಹೊಂಡ ವೆಂಕಟರಮಣ ದೇವಾಲಯವು ಸೊಂದಾದಲ್ಲಿನ ಅತ್ಯಂತ ಚಿಕ್ಕ ದೇವಸ್ಥಾನಗಳಲ್ಲಿ ಒಂದಾಗಿದ್ದು, ಇದನ್ನು ವೆಂಕಟರಮಣ ಸ್ವಾಮಿಗಾಗಿ ಕಟ್ಟಲಾಗಿದೆ. ಪ್ರವಾಸಿಗರಿಗೆ ಸಮಯಾವಕಾಶ ದೊರೆತರೆ ಈ ದೇವಾಲಯಕ್ಕೆ ಭೇಟಿ ಕೊಟ್ಟು ಇಲ್ಲಿನ ಗೋಡೆಗಳಲ್ಲಿನ ಸುಂದರವಾದ ಕೆತ್ತನೆಗಳನ್ನು ನೋಡಬಹುದು. ಅಲ್ಲದೆ ಇಲ್ಲಿನ ಕೆರೆಯ ಸುತ್ತ...
ಸೊಂದಾ ಗ್ರಾಮದ ಪ್ರಮುಖ ಆಕರ್ಷಣೆಗಳಲ್ಲಿ ಮುತ್ತಿನಕೆರೆ ಪಕ್ಷಿಧಾಮವು ಒಂದು. ಈ ಪಕ್ಷಿಧಾಮವು ಮುತ್ತಿನಕೆರೆಯಲ್ಲಿ ನೆಲೆಸಿದೆ. ವಿವಿಧ ಪಕ್ಷಿಗಳು ಮೊಟ್ಟೆ ಇಟ್ಟು ಮರಿಮಾಡುವ ಸಲುವಾಗಿ ಜೂನ್ ನಿಂದ ಅಕ್ಟೋಬರ್ ತಿಂಗಳುಗಳವರೆಗೆ ಈ ಪಕ್ಷಿಧಾಮಕ್ಕೆ ಆಗಮಿಸುತ್ತವೆ.
ಶ್ರೀ ತ್ರಿವಿಕ್ರಮ ದೇವಾಲಯವು ಸೊಂದಾ ಗ್ರಾಮದ ಪ್ರಮುಖ ಆಕರ್ಷಣೆಯಾಗಿದೆ. ಈ ದೇವಾಲಯವು ರಾಮ ತ್ರಿವಿಕ್ರಮ ದೇವರಿಗಾಗಿ ಅರಸಪ್ಪ ನಾಯಕನಿಂದ ಕಟ್ಟಲ್ಪಟ್ಟಿತು ಎಂದು ನಂಬಲಾಗಿದೆ. ಹಾಗು ಇಲ್ಲಿನ ಪವಿತ್ರ ಬೃಂದಾವನವನ್ನು ಶ್ರೀ ವಾದಿರಾಜ ತೀರ್ಥರಿಗಾಗಿ ಶ್ರೀ ಭೂತರಾಜನು ಬದರಿಕಾಶ್ರಮದಿಂದ ತಂದನಂತೆ.ಅಲ್ಲದೆ ಈತನು ತನ್ನ...
ಪ್ರವಾಸಿಗರು ಸೊಂದಾಕ್ಕೆ ಭೇಟಿಕೊಟ್ಟಾಗ ಇಲ್ಲಿನ ತಪೋವನಕ್ಕೆ ಭೇಟಿಕೊಡಬಹುದು. ಈ ಸ್ಥಳವನ್ನು ಶ್ರೀ ವಾದಿರಾಜಸ್ವಾಮಿಯವರು ಧ್ಯಾನಕ್ಕಾಗಿ ಬಳಸುತ್ತಿದ್ದರಂತೆ. ಇದು ಶಾಲ್ಮಲ ನದಿಗೆ ಹೊಂದಿಕೊಂಡಂತಿದ್ದು, ವಾದಿರಾಜ ಮಠದಿಂದ 5 ಕಿ.ಮೀ ದೂರದಲ್ಲಿದೆ. ಈ ಸ್ಥಳವು ಧ್ಯಾನಕ್ಕೆ ಹೇಳಿ ಮಾಡಿಸಿದ ಸ್ಥಳವೆಂದು ಹೆಸರಾಗಿದೆ. ಇಲ್ಲಿ...
ಪ್ರವಾಸಿಗರು ಸೊಂದಾದ ಮೂಲಕ ಹಾದು ಹೋಗುವಾಗ ಇಲ್ಲಿನ ವಾದಿರಾಜ ಮಠಕ್ಕೆ ಭೇಟಿಕೊಡಬಹುದು. ಇದು ಈ ಗ್ರಾಮದ ಪ್ರಮುಖ ಆಕರ್ಷಣೆಯೆಂದು ಗುರುತಿಸಲ್ಪಟ್ಟಿದೆ. ಈ ಮಠವು ಎತ್ತರವಾದ ಬೆಟ್ಟಗಳಿಂದ,ಹಚ್ಚ ಹಸಿರಿನಿಂದ ಕೂಡಿದ ದಟ್ಟ ಅಡವಿಗಳಿಂದ ಮತ್ತು ನದಿಯಿಂದ ಸುತ್ತುವರೆದಿದ್ದು, ಇಲ್ಲಿಗೆ ಭೇಟಿ ಕೊಡುವವರು ಇಲ್ಲಿನ ಸೌಂದರ್ಯಕ್ಕೆ...