ಶರಾವತಿ ಕಣಿವೆಯನ್ನು ವನ್ಯಜೀವಿ ಧಾಮವೆಂದು ಘೋಷಿಸಿದ್ದು 1974 ರಲ್ಲಿ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಇದು ನೆಲೆಸಿದೆ. ಈ ವನ್ಯಜೀವಿಧಾಮ ಸುಮಾರು 431 ಸ್ಕ್ವೇರ್ ಕಿಲೋ ಮೀಟರ್ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಪ್ರಧಾನ ವಲಯದ ಜೊತೆಗೆ ಇದು ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ವಲಯವೂ ಹೌದು. ವನ್ಯಜೀವಿ ಧಾಮದ ಒಳಗೆ ದಟ್ಟ ಕಾಡುಗಳ ನಡುವೆ ಹರಿಯುವ ಶರಾವತಿ ನದಿ ಇಲ್ಲಿನ ಆಕರ್ಷಣೆ.
ಕಪ್ಪು ಚಿರತೆ, ಸಾಂಬಾರ್ಸ್, ಹುಲಿ, ನರಿ, ಸ್ಲಾಥ್ ಕರಡಿ, ಮಲಬಾರ್ ಜಯಂಟ್ ಅಳಿಲು, ಕೂಗುವ ಆಡು, ಜಯಂಟ್ ಹಾರುವ ಅಳಿಲು, ಕಾಡುಹಂದಿ, ಪ್ಯಾಂಗೋಲಿನ್ ಮತ್ತು ಇನ್ನೂ ಹಲವಾರು ಜಾತಿಯ ಪ್ರಾಣಿ ಮತ್ತು ಪಕ್ಷಿಗಳಿಗೆ ಶರಾವತಿ ನದಿ ಕಣಿವೆ ನೆಲೆ ನೀಡುತ್ತದೆ. ಕೋಬ್ರಾ, ಪೈಥಾನ್ಸ್, ಇಲಿ, ಹಾವುಗಳು ಮತ್ತು ಮೊಸಳೆಗಳ ಆವಾಸ ಸ್ಥಾನಗಳೂ ಹೌದು.
ಶರಾವತಿ ವನ್ಯಧಾಮಕ್ಕೆ ಹತ್ತಿರದ ನಗರವೆಂದರೆ ಸಾಗರ. ಶಿವಮೊಗ್ಗ, ಬೆಂಗಳೂರಿನಂತಹ ನಗರಗಳಿಗೆ ರಸ್ತೆ ಮತ್ತು ರೈಲು ಸಂಪರ್ಕ ಹೊಂದಿದೆ. ವನ್ಯಜೀವಿ ಧಾಮಕ್ಕೆ ಸಾಗರದಿಂದ 7 ಕಿಲೋ ಮೀಟರ್ ದೂರ ಮಾತ್ರ. ಮಂಗಳೂರಿನಿಂದ ತಾಳಗುಪ್ಪಕ್ಕೆ ಭಟ್ಕಳದ ಮಾರ್ಗವಾಗಿ ರಸ್ತೆಯಿದೆ. ಶರಾವತಿ ವನ್ಯಧಾಮವನ್ನು ತಲುಪಲು ಪ್ರವಾಸಿಗರಿಗೆ ಇರುವ ವೇಗದ ಮಾರ್ಗವಿದು.


Click it and Unblock the Notifications