ಗೀತಾ ಭವನ ಪುರಾತನ ಸಂಕೀರ್ಣವಾಗಿದ್ದು ಗಂಗಾ ನದಿ ತೀರದಲ್ಲಿದೆ. ಮಹಾಭಾರತ ಮತ್ತು ರಾಮಾಯಣದ ಚಿತ್ರಗಳನ್ನು ಗೋಡೆಗಳ ಮೇಲೆ ಚಿತ್ರಿಸಲಾಗಿದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡಿ ನದಿಯಲ್ಲಿ ಮುಳುಗೇಳುತ್ತಾರೆ.
ಗೀತಾ ಭವನದಲ್ಲಿ ಸುಮಾರು 1000 ರೂಮುಗಳಿದ್ದು ಉಚಿತವಾಗಿ ಭಕ್ತರು ಇಲ್ಲಿ ಉಳಿಯಬಹುದು. ನದಿಯಲ್ಲಿ ಪವಿತ್ರ ಸ್ನಾನ ಮಾಡುವುದಲ್ಲದೆ ಭಕ್ತರು ಇಲ್ಲಿನ ಭವನದಲ್ಲಿ ಸಂತರ ಪ್ರವಚನಗಳನ್ನು ಆಲಿಸಬಹುದು. ಸಸ್ಯಾಹಾರಿ ಊಟ, ಸ್ವೀಟ್ ಮತ್ತು ಇತರೆ ಅಡುಗೆ ಸಾಮಾನುಗಳನ್ನು ಇಲ್ಲಿ ಸೂಕ್ತ ಬೆಲೆಯಲ್ಲಿ ಮಾರಲಾಗುತ್ತದೆ. ಅಲ್ಲದೆ, ಸಂಕೀರ್ಣದಲ್ಲಿ ಒಂದು ಆಯುರ್ವೇದಿಕ್ ವಿಭಾಗ, ಅಪ್ಪೆರಲ್ ಅಂಗಡಿ, ಪುಸ್ತಕದಂಗಡಿ ಮತ್ತು ಲಕ್ಷ್ಮಿನಾರಾಯಣ ದೇವಸ್ಥಾನಗಳಿರುವುದನ್ನು ಕಾಣಬಹುದು. ದಾಖಲೆಗಳಲ್ಲಿ ಹೇಳಿರುವಂತೆ ಇಲ್ಲಿ ದೊರೆಯುವ ಆಯುರ್ವೇದಿಕ್ ಔಷಧಿಗಳನ್ನು ಹಿಮಾಲಯದ ಗಿಡಮೂಲಿಕೆಗಳು ಮತ್ತು ಗಂಗಾ ನದಿ ನೀರಿನಿಂದ ತಯಾರೀಸಲಾಗುತ್ತದೆ.