ರಾಜ್ ಕೋಟ್ ನ ಹೃದಯ ಭಾಗದಲ್ಲಿರುವ ರಾಜ್ ಕುಮಾರ್ ಕಾಲೇಜು ದೇಶದ ಅತ್ಯಂತ ಹಳೆಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಯುವ ಕಥಿವಾರ ರಾಣಿಗೆ ಶಿಕ್ಷಣ ನೀಡಿ ಆಕೆಯನ್ನು ಆಡಳಿತ ನಡೆಸಲು ಸಮರ್ಥವನ್ನಾಗಿ ಮಾಡಲು ಹುಟ್ಟಿಕೊಂಡ ಈ ಶಿಕ್ಷಣ ಸಂಸ್ಥೆಯು ಬ್ರಿಟಿಷರ ಆಡಳಿತದಲ್ಲಿ 1868ರಲ್ಲಿ ನಿರ್ಮಿಸಲಾಯಿತು ಮತ್ತು 1870ರಲ್ಲಿ ಇದನ್ನು ಉದ್ಘಾಟಿಸಲಾಯಿತು. ಸುಮಾರು 26 ಎಕ್ರೆ ಜಾಗದಲ್ಲಿ ವ್ಯಾಪಿಸಿರುವ ಈ ಶಿಕ್ಷಣ ಸಂಸ್ಥೆಯು ಹಳೆಯ ಸೊಬಗನ್ನು ಹೊಂದಿರುವ ಸುಂದರ ಕಟ್ಟಡವನ್ನು ಹೊಂದಿದೆ.
ಆರ್ ಕೆಸಿ ಎಂದು ಕರೆಯಲ್ಪಡುವ ಈ ಶಿಕ್ಷಣ ಸಂಸ್ಥೆಯಲ್ಲಿ ಕೃಷ್ಣ ಕುಮಾರ್ ಸಿಂಗ್ ಭವಸಿಂಗ್(ಮದ್ರಾಸ್ ರಾಜ್ಯದ ಮೊದಲ ಗವರ್ನರ್), ಅಶೋಕ್ ಕಾಮ್ಟೆ(2008ರ ಮುಂಬಯಿ ದಾಳಿಯಲ್ಲಿ ಮೃತಪಟ್ಟ ಮುಂಬಯಿ ಎಸಿಪಿ) ಕ್ರಿಕೆಟಿಗ ಕುಮಾರ್ ಸಿನ್ಹಾ ದುಲೀಪ್ ಸಿಂಗ್ ಜೀ ಮತ್ತು ಸಾಹಿತಿ ಕವಿ ಕಲಾಪಿ ಈ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಕೆಲವು ಜನಪ್ರಿಯ ವ್ಯಕ್ತಿಗಳು.


Click it and Unblock the Notifications