ಪ್ರತಾಪಘಡದ ಲಾಲ್ ಗಂಜ್ ಅಜ್ ಹರ ಎಂಬ ಜಿಲ್ಲೆಯಲ್ಲಿ ಘುಶ್ಮೇಶ್ವರನಾಥ ಧಾಮವಿದೆ. ಈ ದೇವಸ್ಥಾನದ ಕಾರಣದಿಂದ ಈ ಪಟ್ಟಣವು ಸಾಮಾನ್ಯವಾಗಿ ಐತಿಹಾಸಿಕ ಯಾತ್ರಾಸ್ಥ ಳವೆಂದು ಗುರುತಿಸಲ್ಪಟ್ಟಿದೆ. ರಾಮಾಯಣದ ಕಾಲದಲ್ಲಿ ಭಗವಾನ್ ಶ್ರೀ ರಾಮಚಂದ್ರನು ಈ ಸ್ಥಳದ ಮೂಲಕ ಸಾಗಿದ್ದನು ಎಂದು ಪುರಾಣಗಳು ಹೇಳುತ್ತವೆ. ಧಾಮದ ಸಮೀಪವಿರುವ ಬಹು ಅಪರೂಪವಾದ ಕರೇಲ ವೃಕ್ಷದ ಪ್ರಸ್ತಾವನೆಯು ಗೋಸ್ವಾಮಿ ತುಳಸಿದಾಸರ ರಾಮಚರಿತ ಮಾನಸದಲ್ಲಿ ಕಂಡುಬರುತ್ತದೆ.
ಪವಿತ್ರವಾದ ಸಾಯಿ ನದಿಯು ಈ ಧಾಮದ ಸಮೀಪದಲ್ಲಿಯೂ ಪ್ರವಹಿಸುತ್ತದೆ. ತೀರ್ಥಸ್ನಾನಗೈಯಲು ಹಾಗೂ ಪೂಜೆ ಸಲ್ಲಿಸಲು ಬರುವ ಸಹಸ್ರಾರು ಭಕ್ತಾಧಿಗಳನ್ನು ಈ ದೇವಸ್ಥಾನವೂ ಕೂಡ ವರ್ಷವಿಡೀ ಆಕರ್ಷಿಸುತ್ತದೆ.