ಚಂದ್ರಶೇಖರ್ ಆಜಾದ್ ಸ್ಮಾರಕ, ತಾಯಿ ಭಾರತಿಯ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ ಆಜಾದ್ ಅವರ ತ್ಯಾಗವನ್ನು ಉಳಿಸಿ ಹಾಗು ಸ್ಮರಿಸಿಕೊಳ್ಳುವ ದೊಡ್ಡ ಪ್ರಯತ್ನವಾಗಿದೆ. ಓರಛಾದಿಂದ ಕೇವಲ 4 ಕಿ. ಮೀ ದೂರದಲ್ಲಿ ನೆಲೆಯಾಗಿರುವ ಈ ಸ್ಥಳವು ದೇಶಭಕ್ತ ಶಹೀದ್ ಚಂದ್ರಶೇಖರ್ ಆಜಾದ್ ಜೀವನ ವಿವರವಾದ ಲೆಕ್ಕವನ್ನು ನೀಡುವಂಥದ್ದು. ಪ್ರೇರಕ ಸ್ವಾತಂತ್ರ್ಯ ಹೋರಾಟಗಾರ ಆಜಾದ್ ಅವರ ಶಹೀದ್ ಸ್ಮಾರಕ್ ಹಾಗು ಅದರ ಸ್ಪಷ್ಟ ಐತಿಹಾಸಿಕ ಪ್ರಾಮುಖ್ಯತೆಗೆ ಪ್ರತಿವರ್ಷ ಪ್ರವಾಸಿಗರನ್ನು ದೊಡ್ಡ ಸಂಖ್ಯೆಯ ಆಕರ್ಷಿಸುವ ಒಂದು ಭವ್ಯವಾದ ವರ್ತಮಾನದ ಮೆಚ್ಚುಗೆಯ ಸ್ಥಳವಾಗಿದೆ.
ಭಾರತದ ಸ್ವಾತಂತ್ರ್ಯ ಗಳಿಕೆಗಾಗಿ ಶ್ಲಾಘನೀಯ ಪ್ರಯತ್ನವನ್ನು ಮಾಡಿದ ಕ್ರಾಂತಿಕಾರಿ ನಾಯಕ ಆಜಾದ್ ರನ್ನು 1926-1927 ರಲ್ಲಿ ಗಡಿಪಾರು ಮ್ಮಡಲಾಗಿತ್ತು. "ಅಜ್ಞಾತವಾಸ" ಕ್ಕೆ ಗುರಿಯಾಗಿದ್ದ ಅವರು ಆ ದಿನಗಳಲ್ಲಿ ಇಲ್ಲಿ ವಾಸವಾಗಿದ್ದರು. 1984 ರಲ್ಲಿ ಭಾರತದ ಅಂದಿನ ಪ್ರಧಾನಿ, ಸ್ಮಾರಕದ ಒಂದು ಸಂಪೂರ್ಣ ಹೊಸ ನೋಟ ನೀಡುವ ಶಹೀದ್ ಚಂದ್ರಶೇಖರ್ ಆಜಾದ್ ಅವರ ಪೂರ್ಣ ಗಾತ್ರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. ಜನರು ಚಂದ್ರಶೇಖರ್ ಆಜಾದ್ ಹೋರಾಟಗಳ ಬಗ್ಗೆ ತಿಳಿಸುತ್ತಿದ್ದಂತೆ ಸ್ವತಃ ಪ್ರವಾಸಿಗರಲ್ಲಿ ದೇಶಭಕ್ತಿಯ ಭಾವನೆ ಪುನಶ್ಚೇತನಗೊಳ್ಳುತ್ತದೆ.