ಸಾರಂಗಪುರಂ ಹನುಮಾನ ದೇವಾಲಯ ಸಾರಂಗಪುರಂ ಗ್ರಾಮದಲ್ಲಿದ್ದು ನಿಜಾಮಾಬಾದ್ ನಿಂದ 8 ಕಿ.ಮೀ ದೂರದಲ್ಲಿದೆ. ಈ ಗ್ರಾಮ ಒಂದು ಮಂಡಲವಾಗಿದ್ದು ನಿಜಾಮಾಬಾದ್ ಜಿಲ್ಲೆಯಲ್ಲಿದೆ.
ಹನುಮಾನ ದೇವಾಲಯ, ಈ ಭಾಗದ ಜನರು ಹೆಚ್ಚು ಭೇಟಿ ನೀಡುವ ದೇವಾಲಯವಾಗಿದ್ದು ಪ್ರವಾಸಿಗಳೂ ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಇದು ಕೇವಲ ನಿಜಾಮಾಬಾದ್ ಮಾತ್ರವಲ್ಲದೆ ಇಡೀ ಭಾರತದಲ್ಲಿ ಒಂದು ಪ್ರಮುಖ ಯಾತ್ರಾ ಸ್ಥಳವಾಗಿದೆ. ಇಲ್ಲಿನ ಏಕಶಿಲಾ ಹನುಮಂತ ಮೂರ್ತಿ, ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಸಂತ ಸಮರ್ಥ ರಾಮದಾಸ್ 425 ವರ್ಷಗಳ ಹಿಂದೆ ಈ ದೇವಾಲಯವನ್ನು ಆರಂಭಿಸಿದ್ದರು ಎಂದು ಪ್ರಚಲಿತವಾಗಿದೆ. ಅಂದಿನಿಂದ ಇಂದಿನ ತನಕ ದೊಡ್ಡ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಮತ್ತು ಭಕ್ತರು ಇಲ್ಲಿ ಆಗಮಿಸುತ್ತಾರೆ.
ವಾನರ ದೇವರಿಗೆ ಮಂಗಳವಾರ ಪವಿತ್ರ ದಿನ ಎಂದು ನಂಬಲಾದ ಕಾರಣ ಆ ದಿನದಂದು ಭಕ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಸಂಜೆಯ ವೇಳೆ ವಿಶೇಷ ಪೂಜೆ ಮತ್ತು ಪ್ರಾರ್ಥನೆಗಳನ್ನು ಇಲ್ಲಿ ಮಾಡಲಾಗುತ್ತದೆ.