ಸುಖಾನಂದಜೀ ಆಶ್ರಮ ನೀಮಚ್ ನಿಂದ 32 ಕಿಲೋಮೀಟರು ದೂರದಲ್ಲಿದ್ದು, ರಾಜಸ್ಥಾನದ ಗಡಿಯಲ್ಲಿದೆ. ಈ ಆಶ್ರಮವು ಸುಂದರವಾದ ಪುರಾತನ ಕಲ್ಲಿನ ಗುಹೆಯಲ್ಲಿದೆ. ಇದರ ಹತ್ತಿರದಲ್ಲಿ ಶಿವನ ದೇವಸ್ಥಾನವಿದ್ದು, ಈ ಆಶ್ರಮ ಪ್ರಕೃತಿ ರಮಣೀಯವಾಗಿದೆ. ವ್ಯಾಸದೇವ ಅವರ ಮಗನಾದ ಶುಕ, ಈ ಆಶ್ರಮವನ್ನು ಸ್ಥಾಪಿಸಿದ್ದ ಎಂದು ನಂಬಲಾಗುತ್ತದೆ. ವ್ಯಾಸದೇವ ಅಥವಾ ವೇದವ್ಯಾಸ ಅವರು, 24000 ಶ್ಲೋಕಗಳನ್ನು ಒಳಗೊಂಡ ಭಾರತ ಸಂಹಿತ ದ ರಚನೆಕಾರರು. ಶುಕ ಅಥವಾ ಶುಕದೇವ ಅಥವಾ ಬ್ರಹ್ಮರತ ಅವರು ವೈಷ್ಣವರ ಪುರಾಣ ಗ್ರಂಥಗಳಲ್ಲಿನ ಪ್ರಶಂಸನೀಯ ವ್ಯಕ್ತಿಯಾಗಿದ್ದಾರೆ. ಇಲ್ಲಿಗೆ ಎಲ್ಲಾ ಕಾಲಗಳಲ್ಲೂ ಯಾತ್ರಿಗಳು ಭೇಟಿ ನೀಡುತ್ತಾರೆ. ಹರ್ಯಲಿ ಅಮಾವಾಸ್ಯ ಮತ್ತು ಬೈಶಖ್ ಪೂರ್ಣಿಮ ಸುಖಾನಂದಜೀ ಆಶ್ರಮದಲ್ಲಿನ ಎರಡು ಪ್ರಮುಖ ವಾರ್ಷಿಕ ಜಾತ್ರೆಗಳು.


Click it and Unblock the Notifications