ಮಧ್ಯ ಪ್ರದೇಶದ ನೀಮಚ್ ಮತ್ತು ಮಂದ್ಸುರ್ ಜಿಲ್ಲೆಗಳ ಉತ್ತರ ಗಡಿಯಲ್ಲಿರುವ ಗಾಂಧಿ ಸಾಗರ್ ಅಭಯಧಾಮ , ಪ್ರಕೃತಿಯ ಇಂದ್ರಜಾಲವನ್ನು ಅರಿಯಲು ಮತ್ತು ಸಾಕ್ಷ್ಯ ವಹಿಸಲು ಒಂದು ಒಳ್ಳೆಯ ಸ್ಥಳ. ಇದನ್ನು 1974 ರಲ್ಲಿ ಗುರುತಿಸಲಾಗಿದ್ದು, 1983 ರಲ್ಲಿ ಸರಕಾರ ಇಲ್ಲಿಗೆ ಇನ್ನಷ್ಟು ಸ್ಥಳವನ್ನು ಮಂಜೂರು ಮಾಡಿತು. ಗಾಂಧಿ ಸಾಗರ್ ಅಭಯಧಾಮದ ವಿಸ್ತೀರ್ಣ ಸುಮಾರು 368.62 ಚದರ ಕಿಲೋಮೀಟರು ಗಳು. ರಾಜಸ್ಥಾನಕ್ಕೂ ಹತ್ತಿರದಲ್ಲಿರುವ ಈ ಅಭಯದಾಮದಲ್ಲಿ ಯಾತ್ರಿಗಳು ಖಂಡಿತವಾಗಿಯೂ ಆನಂದಮಯ ಸಮಯವನ್ನು ಕಳೆಯಬಹುದು.
ಅಭಯಧಾಮದ ಮೂಲಕ ಹರಿಯುವ ಚಂಬಲ್ ನದಿಯು, ಅಭಯಧಾಮವನ್ನು ಪಶ್ಚಿಮ ಭಾಗ, ನೀಮಚ್ ಜಿಲ್ಲೆಗೆ ಸೇರಿದ್ದು, ಹಾಗೂ ಪೂರ್ವ ಭಾಗ, ಮಂದ್ಸುರ್ ಜಿಲ್ಲೆಗೆ ಸೇರಿದ್ದು, ಗಳಾಗಿ ವಿಂಗಡಿಸುತ್ತದೆ. ಗಾಂಧಿ ಸಾಗರ್ ಅಭಯಧಾಮಕ್ಕೆ ಭೇಟಿ ನೀಡುವ ಯಾತ್ರಿಗಳಿಗೆ ಅಧ್ಯಯನ ಮಾಡಲು ಹಲವಾರು ವಿಷಯಗಳಿವೆ.