ಪ್ರವಾಸಿಗರು ನಂಜನಗೂಡಿಗೆ ಹೋದಾಗೊಮ್ಮೆ ಪರಶುರಾಮ ಕ್ಷೇತ್ರಕ್ಕೆ ಭೇಟಿ ಕೊಡಬಹುದು. ಈ ಸ್ಥಳವು ಕಪಿಲ ಮತ್ತು ಕೌಂಡಿನ್ಯ ನದಿಗಳ ಸಂಗಮವೆಂದೆ ಪ್ರಖ್ಯಾತವಾಗಿದೆ. ಈ ಸ್ಥಳದಲ್ಲಿ ಪರಶುರಾಮನು ತನ್ನ ತಾಯಿಯನ್ನು ಕೊಂದ ಕಾರಣದಿಂದ ಬಂದ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಂಡನೆಂದು ಪ್ರತೀತಿ ಇದೆ. ಪರಶುರಾಮನು ಒಮ್ಮೆ ತನ್ನ ಕೊಡಲಿಯಿಂದ ಆಕಸ್ಮಿಕವಾಗಿ ಶಿವನ ತಲೆಗೆ ಹೊಡೆದಾಗ ಶಿವನು ಅದರ ಪ್ರಾಯಶ್ಚಿತವಾಗಿ ನಂಜನಗೂಡಿನಲ್ಲಿ ಒಂದು ಗುಡಿ ಕಟ್ಟಿಸಿ ತಪಸ್ಸು ಕೈಗೊಳ್ಳಲು ಸೂಚನೆ ನೀಡಿದನೆಂದು ಹೇಳಲಾಗುತ್ತದೆ.ಪರಶುರಾಮನ ಕ್ಷೇತ್ರ ಭೇಟಿ ಮಾಡದೆ ಹೋದರೆ, ನಂಜನಗೂಡಿನ ಯಾತ್ರೆಯು ಸಂಪೂರ್ಣವಾಗುವುದಿಲ್ಲವೆಂದು ನಂಬಲಾಗುತ್ತದೆ.