ನಂದಿ ಗ್ರಾಮದಿಂದ ಕೇವಲ 3 ಕಿ.ಮೀ.ನಷ್ಟು ಸಮೀಪದಲ್ಲೇ ಇರುವ ಕಣಿವೇನಾರಾಯಣಪುರವು ನೈಸರ್ಗಿಕ ಸೌಂದರ್ಯ ಸವಿಯಲು ಅತ್ಯಂತ ಸೂಕ್ತ ಸ್ಥಳವಾಗಿದೆ. ಪ್ರವಾಸಿಗರು ಕಣಿವೇನಾರಾಯಣಪುರದ ಸುತ್ತಮುತ್ತಲಿನ ಬೆಟ್ಟಗಳಾದ ಸ್ಕಂದಗಿರಿ, ಬ್ರಹ್ಮಗಿರಿ, ನಂದಿಗಿರಿ ಮತ್ತು ಚನ್ನಗಿರಿ ಶಿಖರಗಳನ್ನು ಬರೀಗಣ್ಣಿನಿಂದ ನೋಡಿ ಸವಿಯಬಹುದು.ಕಣಿವೇನಾರಾಯಣಪುರ ಗ್ರಾಮದ ಕುಡಿಯುವ ನೀರು, ಒಳಚರಂಡಿ, ಉದ್ಯೋಗ ಮತ್ತು ಶಾಲಾ ಸೌಕರ್ಯಗಳ ಜವಾಬ್ದಾರಿಯನ್ನು ಇಲ್ಲಿನ ಸತ್ಯ ಸಾಯಿಬಾಬಾ ಫೌಂಡೇಷನ್ ನ ಹೊತ್ತಿಕೊಂಡಿದೆ. ಈ ಗ್ರಾಮದಲ್ಲಿ ಸಾರ್ವಜನಿಕರಿಗೆ ಸೌಲಭ್ಯಕ್ಕಾಗಿ ಒಂದು ಶಾಲೆ, ನೀರಾವರಿ, ಒಳಚರಂಡಿ ವ್ಯವಸ್ಥೆ, ಆರೋಗ್ಯ ಸೌಕರ್ಯ, ದೊಡ್ಡದಾದ ಮನೆಗಳು ಮತ್ತು ಸಮುದಾಯ ಭವನಗಳನ್ನು ನಿರ್ಮಿಸಲಾಗುತ್ತಿದೆ.ಕಣಿವೇನಾರಾಯಣಪುರ ಗ್ರಾಮದಲ್ಲಿ ಫಲವತ್ತಾದ ಕೃಷಿಕ ಭೂಮಿ ಇರುವುದರಿಂದ ಇಲ್ಲಿ ಬೆಳೆದ ತೆಂಗು, ರೇಷ್ಮೆ, ದ್ರಾಕ್ಷಿ ಹಾಗೂ ನೀಲಗಿರಿ ಮರಗಳಿಗೆ ಪ್ರಸಿದ್ಧಿ ಹೊಂದಿದೆ. ಅಲ್ಲದೇ ಇಲ್ಲಿನ ಅರಣ್ಯ ಪ್ರದೇಶದಲ್ಲಿರುವ ವನ್ಯಜೀವಿಗಳಿಂದಾಗಿಯೂ ಕೂಡ ಹಲವಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.ಕಣಿವೇನಾರಾಯಣಪುರ ಗ್ರಾಮಸ್ಥರ ಪ್ರಕಾರ ಪ್ರಕಾರ ಮಹಾತ್ಮ ಗಾಂಧೀಜಿಯವರು ನಂದಿ ಬೆಟ್ಟಕ್ಕೆ ಭೇಟಿ ಕೊಡುವ ಸಂದರ್ಭದಲ್ಲಿ ಈ ಸ್ಥಳದಲ್ಲೇ ಉಳಿದುಕೊಂಡಿದ್ದರಂತೆ. ಅಲ್ಲದೇ ಈ ಗ್ರಾಮದ ಸಮೀಪದಲ್ಲೇ ಇರುವ ಆಕರ್ಷಣೆಯೆಂದರೆ ಟಿಪ್ಪು ಸುಲ್ತಾನನ ಬೇಸಿಗೆಯ ಅರಮನೆ.