ಸಮಯವಿದ್ದಲ್ಲಿ ಪ್ರವಾಸಿಗರು ನಾಗರಹೊಳೆಯ ಸಾನಿಧ್ಯದಲ್ಲಿಹ ಲಕ್ಷ್ಮಣ ತೀರ್ಥ ನದಿಯ ದಂಡೆಯ ಮೇಲಿರುವ ರಾಮೇಶ್ವರ ದೇವಾಲಯಕ್ಕೊಮ್ಮೆ ಭೇಟಿ ಕೊಡಬಹುದು . ಈ ಪ್ರದೇಶವು ಬತ್ತದ ತೆನೆಯಿಂದ ಸುತ್ತುವರೆದಿದ್ದು ಹಾಗೆಯೇ ಮುಂದೆ ಸಾಗಿದರೆ ಕಾಡಿನ ಮೂಲಕ ಸಮೀಪದಲ್ಲಿರುವ ಜಲಪಾತವೊಂದನ್ನು ಮುಟ್ಟುತ್ತದೆ. ಈ ದೇವಾಲಯವನ್ನು ಪರಮ ಶಿವನಿಗೆ ಅರ್ಪಿಸಲಾಗಿದ್ದು ಮಹಾ ಶಿವರಾತ್ರಿಯ ಸಮಯದಲ್ಲಿ ಈ ಸ್ಥಳವು ಅಸಂಖ್ಯಾತ ಭಕ್ತರಿಂದ ತುಂಬಿ ತುಳುಕುತ್ತದೆ.ರಾಮೇಶ್ವರ ದೇವಲಯದಲ್ಲಿ ಶುದ್ಧ ಮನಸ್ಸಿನಿಂದ ಪೂಜೆ ಸಲ್ಲಿಸಿದಾಗ ಅಲ್ಲಿರುವ ಮೂಲ ದೇವನಾದ ಶಿವನು ಭಕ್ತರು ಹಿಂದೆ ಮಾಡಿರುವ ಪಾಪಗಳಿಂದ ಮುಕ್ತಿ ನೀಡುವನೆಂಬುದು ಸ್ಥಳೀಯರ ನಂಬಿಕೆ. ರಾಮನ ಸಹೋದರನಾದ ಲಕ್ಷ್ಮಣನು ರಾಮ ಸೀತೆಯರ ನೀರಡಿಕೆಯನ್ನು ಭರಿಸಲು ಬ್ರಹ್ಮಗಿರಿ ಶ್ರೇಣಿಯಲ್ಲಿ ಬಾಣ ಬಿಟ್ಟ ಕಾರಣ ಜನಿಸಿದ ಲಕ್ಷ್ಮಣ ತೀರ್ಥ ನದಿಯ ನೀರನ್ನು ಪುಣ್ಯ ಜಲವೆಂದು ಗೌರವಿಸಲಾಗುತ್ತದೆ. ಬಾಣ ಬಿಟ್ಟ ಬೆಟ್ಟದ ಸಾಲಿನಲ್ಲಿ ನದಿ ಹುಟ್ಟಿದರಿಂದ ಅದಕ್ಕೆ ಲಕ್ಷ್ಮಣ ತೀರ್ಥ ಎಂಬ ಹೆಸರೂ ಬಂದಿದೆ.