ಸಾಗರ್ ತಾಲಾಬ್ ಸರೋವರದ ಸುತ್ತಲೂ ಇರುವ ಸ್ಮಾರಕಗಳ ಗುಂಪೇ ಈ ದೈ ಕಿ ಚೊಟ್ಟಿ ಬೆಹೆನ್ ಕಾ ಮಹಲ್. ವಾಸ್ತವಿಕವಾಗಿ ಈ ಬೃಹತ್ ಸಮಾಧಿಯು ಒಬ್ಬ ದಾದಿಯ ನೆನಪಿಗಾಗಿ ಅವಳು ಮಾಡಿದ ಸೇವೆಯ ಗೌರವಾರ್ಥವಾಗಿ ಕಟ್ಟಿಸಿದ್ದಾಗಿದೆ. ಪುರಾತನ ಕಾಲದಲ್ಲಿ ರಾಜಕುಟುಂಬಗಳು ದಾದಿಯರನ್ನು ಕೆಲಸಕ್ಕೆ ಇಟ್ಟುಕೊಳ್ಳುವುದು ಸಾಮಾನ್ಯವಾಗಿತ್ತು. ಅವರು ರಾಜವಂಶದ ಶಿಶುಗಳಿಗೆ ಹಾಲುಣಿಸುವುದು, ಅವುಗಳ ಲಾಲನೆ-ಪಾಲನೆ ನೋಡಿಕೊಳ್ಳುತ್ತಿದ್ದರು.
ಇಂತಹ ದಾದಿಯರಿಗೆ ಆಸ್ಥಾನದಲ್ಲಿ ಅಗತ್ಯವಾದ ಕೆಲವು ಅಧಿಕಾರಗಳೂ ಇರುತ್ತಿದ್ದವು. ಅಲ್ಲದೆ ಅವರ ಮಾತಿಗೆ ತಕ್ಕಮಟ್ಟಿಗೆ ಬೆಲೆಯನ್ನೂ ನೀಡುತ್ತಿದ್ದರು. ರಾಜವಂಶಜರನ್ನು ಅವರು ನೋಡಿಕೊಳ್ಳುವ ರೀತಿಯ ಮೇಲೆ ದಾದಿಯರ ಸ್ಥಾನಮಾನಗಳ ನಿರ್ಧಾರವಾಗುತ್ತದೆ. ಒಳ್ಳೆಯ ದಾದಿಯರು ಹಾಗು ಅವರ ಮೇಲ್ವಿಚಾರಕರ (ಸಿಸ್ತರ) ಹೆಸರಿನಲ್ಲಿ ಸ್ಮಾರಕಗಳನ್ನು ಕಟ್ಟೆಸುವ ಮೂಲಕ ಮರಣಾ ನಂತರವೂ ಅವರ ಸೇವೆಗೆ ಗೌರವ ನೀಡಲಾಗುತ್ತಿತ್ತು."ದೈ ಕಿ ಚೊಟ್ಟಿ ಬೆಹೆನ್ ಕಾ ಮಹಲ್ " ಎಂದರೆ ಅಕ್ಷರಶಃ ದಾದಿಯ ಸಿಸ್ಟರಿನ ಅರಮನೆ ಎಂಬ ಅರ್ಥ ಕೋಡಿತ್ತದೆ.


Click it and Unblock the Notifications