ಭೃಗು ಕೆರೆ ಒಂದು ಅತ್ಯಂತ ಜನಪ್ರಿಯ ನೀರಿನ ತಾಣ ಎನಿಸಿದೆ. ಹಿಂದಿ ಧಾರ್ಮಿಕ ನಂಬಿಕೆಯಲ್ಲೂ, ಈ ಕೆರೆಗೆ ಪವಿತ್ರ ಸ್ಥಾನ ಇದೆ. ಇದು ಹಿಮಾಲಯದ ನೀರಿನಿಂದ ಸಮೃದ್ಧವಾಗಿದ್ದು, ಇದರ ಪ್ರದೇಶ ಮನಮೋಹಕವಾಗಿದೆ. ಈ ಪ್ರದೇಶ ಮಹರ್ಷಿ ಭೃಗು ಅವರಿಗೆ ಸೇರಿದ್ದು. ಹಿಂದೂ ಧರ್ಮದ ಸಪ್ತರ್ಷಿಗಳಲ್ಲಿ ಒಬ್ಬರಾದ ಇವರು ಇದೆ ಕೆರೆ ದಡದ ಮೇಲೆ ಧ್ಯಾನಕ್ಕೆ ಕುಳಿತಿದ್ದರಂತೆ. ಭೃಗು ಮಹರ್ಷಿಗಳು ತಮ್ಮ ಭೃಗು ಸಂಹಿತೆಯನ್ನು ಇಲ್ಲಿಯೇ ಕುಳಿತು ರಚಿಸಿದರು ಎಂದು ನಂಬಲಾಗಿದೆ. ಹಿಂದಿನ ಮಾಹಿತಿಯನ್ನು ಒದಗಿಸುತ್ತಾ, ಭವಿಷ್ಯದ ಯೋಜನೆಯನ್ನು ರೂಪಿಸಲು ಅಗತ್ಯವಿರುವ ಮನುಗ್ರಂಥ ಇದಾಗಿದೆ. ಇಲ್ಲೊಂದು ನಿಸರ್ಗದತ್ತ ಚಿಲುಮೆ ಇದ್ದು, ಅದನ್ನು ನೆಹರು ಕುಂಡ ಎಂದು ಕರೆಯಲಾಗಿದೆ. ಇದು ಭೃಗು ಕೆರೆಯ ಜಲ ಮೂಲ ಕೂಡ. ಇಲ್ಲಿನ ಸ್ಥಳಾಕರ್ಷಣೆಯನ್ನು ಇದು ಹೆಚ್ಚಿಸಿದೆ.