ಶ್ರೀ ಪಾರ್ಶ್ವ ಪದ್ಮಾವತಿ ಶಕ್ತಿ ಪೀಠ ತೀರ್ಥಧಾಮವು ಕೃಷ್ಣಗಿರಿಯಿಂದ 7ಕಿ.ಮೀ ದೂರದಲ್ಲಿ ಇರುವ ಒರಪ್ಪಂ ಗ್ರಾಮದಲ್ಲಿ ನೆಲೆಗೊಂಡಿದೆ. ಪರಮಪೂಜ್ಯ ಶ್ರೀ ಶ್ರೀ ಶ್ರೀ ವಸಂತ್ ಗುರುದೇವ್ಜೀಯವರಿಂದ ನಿರ್ಮಾಣಗೊಂಡ ಈ ಆಧ್ಯಾತ್ಮಿಕ ಕೇಂದ್ರವು ಜೈನರ 23 ಮತ್ತು 24ನೇ ತೀರ್ಥಂಕರರನ್ನು ಆರಾಧಿಸುತ್ತದೆ. ಈ ಸಂಸ್ಥೆಯು ಶಾಂತಿ ಮತ್ತು ಸಹಬಾಳ್ವೆಯನ್ನು ಬೆಳೆಸುತ್ತಿದೆ.
ಈ ದೇವಾಲಯವು ತನ್ನ ಶಾಂತಿ ಮತ್ತು ಪ್ರಸನ್ನತೆಯಿಂದ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಪರಮಪೂಜ್ಯ ಶ್ರೀ ಶ್ರೀ ಶ್ರೀ ವಸಂತ್ ಗುರುದೇವ್ಜೀಯವರು ಹಲವಾರು ಜಾಗತೀಕ ಸಮಾವೇಶಗಳಲ್ಲಿ ಭಾಗವಹಿಸಿ ಅಗತ್ಯವಿರುವವರಿಗೆ ಆಧ್ಯಾತ್ಮವನ್ನು ಭೋಧಿಸಿದ್ದಾರೆ. ಈ ದೇವಾಲಯಕ್ಕೆ ಬೇಟಿಕೊಡುವುದರಿಂದ ನೀವು ನಿಮ್ಮಲ್ಲಿ ಕಳೆದುಹೋಗಿರುವ ಶಾಂತಿ ಮತ್ತು ಪ್ರಸನ್ನತೆಯನ್ನು ಮರಳಿ ಪಡೆಯಬಹುದು.