ಮುಂಬೈನಿಂದ ಗಣಪತಿಪುಲೆಗೆ ವಾಹನದಲ್ಲಿ ಹೋಗುವುದು ಅತ್ಯುತ್ತಮ ಆಯ್ಕೆಯಾಗಿದೆ. ಇಲ್ಲಿನ ಘಟ್ಟಗಳಲ್ಲಿನ ರಸ್ತೆಗಳು ಸುವ್ಯವಸ್ಥೆಯಿಂದ ಕೂಡಿದ್ದು, ಅತ್ಯುತ್ತಮ ಸ್ಥಿತಿಯಲ್ಲಿದೆ. ಅಲ್ಲದೆ ರಸ್ತೆ ಅಕ್ಕ ಪಕ್ಕ ಸೌಂದರ್ಯದಿಂದ ಕೂಡಿದ್ದು, ಪ್ರಯಾಣ ಆಯಾಸ ರಹಿತವಾಗಲು ನೆರವಾಗುತ್ತದೆ. ಮುಂಬೈನಿಂದ ಗಣಪತಿಪುಲೆ 375 ಕಿ.ಮೀ ದೂರದಲ್ಲಿದೆ. ಇದು ರತ್ನಾಗಿರಿಯಿಂದ ಕೇವಲ 50 ಕಿ.ಮೀ ದೂರದಲ್ಲಿದೆ. ರತ್ನಾಗಿರಿಯು ಮುಂಬೈ - ಗೋವಾ ರಸ್ತೆಯಲ್ಲಿ ಸಿಗುತ್ತದೆ. ಅಷ್ಟೇ ಅಲ್ಲದೆ ರಾಜ್ಯ ಸರ್ಕಾರದ ಮತ್ತು ಎಂ ಟಿ ಡಿ ಸಿ ಬಸ್ಸುಗಳು ಗಣಪತಿಪುಲೆಗೆ ಹೋಗಿ ಬರುತ್ತಿರುತ್ತವೆ. ಇದು ಸುರಕ್ಷಿತವು ಮತ್ತು ಮಿತವ್ಯಯದಾಯಕವು ಆಗಿದೆ. ಎಂ ಎಸ್ ಆರ್ ಟಿ ಸಿ ಬಸ್ಸುಗಳು ಮುಂಬೈನಿಂದ ಗಣಪತಿಪುಲೆಗೆ ದೈನಂದಿನ ಪ್ರಯಾಣದ ಸೌಕರ್ಯವನ್ನು ಒದಗಿಸುತ್ತವೆ. ಇವಿಲ್ಲದಿದ್ದರೆ ಪ್ರವಾಸಿಗರು ಕ್ಯಾಬ್ ಗಳ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳಬಹುದು...