ಧರ್ಮಸ್ಥಳಕ್ಕೆ ಪ್ರವಾಸ ನೀಡುವ ಪ್ರವಾಸಿಗರಿಗೆ ನೇತ್ರಾವತಿ ನದಿಯ ತೀರದಲ್ಲಿ ನೆಲೆಸಿದ ರಾಮ ಮಂದಿರಕ್ಕೆ ಭೇಟಿ ನೀಡಲು 'ಶಿಫಾರಸು' ಮಾಡಲಾಗುತ್ತದೆ. ತನ್ನ ಆಧ್ಯಾತ್ಮಿಕ ಬೋಧನೆಗಳಿಂದ ಜನರ ನಡುವೆ ಜನಪ್ರಿಯವಾಗಿರುವ ನಿತ್ಯಾನಂದ ಸ್ವಾಮಿ, ೨೦೦೩ ರಲ್ಲಿ ಈ ಯಾತ್ರಾಸ್ಥಳವನ್ನು ನಿರ್ಮಿಸಿದರು. ದೇವಸ್ಥಾನ ತಲುಪಿದ ಮೇಲೆ, ಭಕ್ತರಿಗೆ ಎರಡು ಮಹಡಿಗಳಲ್ಲಿ ಭಗವಾನ್ ರಾಮ, ಸೀತೆ ಮತ್ತು ಲಕ್ಷ್ಮಣರ ಅಮೃತಶಿಲೆಯ ವಿಗ್ರಹಗಳನ್ನು ನೋಡಲು ಅವಕಾಶ ಸಿಗುತ್ತದೆ. ರಾಮ್ ಮಂದಿರ, ಧ್ಯಾನ ಅಭ್ಯಾಸ ಬಯಸುವ ಜನರಿಗೆ ಪರಿಪೂರ್ಣ ಸ್ಥಳವಾಗಿದೆ. ಈ ಮಂದಿರ ಬೆಳಗ್ಗೆ 6 ರಿಂದ 2 ಘಂಟೆಯವರೆಗೆ ಮತ್ತು ಸಂಜೆ 5 ರಿಂದ 8ರ ವರೆಗೆ ತೆರೆದಿರುತ್ತದೆ.