ಬಾಹುಬಲಿಯ ಪ್ರತಿಮೆ ರತ್ನಗಿರಿ ಬೆಟ್ಟದ ಮೇಲೆ ಇದ್ದು, 'ಭೇಟಿ ಮಾಡಲೆಬೇಕಾದ ' ಧರ್ಮಸ್ಥಳದ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಪ್ರತಿಮೆಯು ೩೯ ಅಡಿ ಎತ್ತರವಿದ್ದು 1973 ರಲ್ಲಿ ರೆಂಜನ ಗೋಪಾಲ ಕೃಷ್ಣ ಶೆನೊಯಿ ಎಂಬುವವರಿಂದ ಕೆತ್ತಲ್ಪಟ್ಟಿದೆ. ಫೆಬ್ರವರಿ 1982ರಲ್ಲಿ, ಈ ಪ್ರತಿಮೆಯನ್ನು ವೀರೇಂದ್ರ ಹೆಗ್ಗಡೆಯವರ ಮೂಲಕ ದೇವಾಲಯದ ಒಳಗೆ ಸೇರಿಸಲಾಯಿತು.ಈ ಪ್ರತಿಮೆಯು ತ್ಯಾಗ ಮತ್ತು ನಿಸ್ವಾರ್ಥತೆಯ ಸಂಕೇತವಾಗಿ ಜೈನರ ಸುಪರ್ದಿಯಲ್ಲಿದೆ. ಜನಪ್ರಿಯ ಜಾನಪದದ ಪ್ರಕಾರ, ಬಾಹುಬಲಿ ಮತ್ತು ಭರತ (ಹಿರಿಯ ಸಹೋದರ), ಪ್ರಾಧಾನ್ಯ ಪಡೆಯಲು ಪರಸ್ಪರ ಹೋರಾಡಲು ನಿರ್ಧರಿಸಿದ ರಾಜಕುಮಾರರು ಎಂದು ಹೇಳಲಾಗಿದೆ. ಯುದ್ಧ ಗೆದ್ದ ನಂತರ, ಬಾಹುಬಲಿ ತನ್ನ ಸಹೋದರನಿಗೆ ಜೀವದಾನ ನೀಡಿದನು ಈ ಸಂಧರ್ಬದಲ್ಲಿ ಅವನು ಯುದ್ಧ ಮತ್ತು ಹತ್ಯೆಗಳ ನಿಷ್ಪ್ರಯೋಜಕತೆಯ ಅರಿವನ್ನು ಹೊಂದಿದ . ಇದರ ನಂತರ, ಅವನು ಭರತನ ಹೆಗಲ ಮೇಲೆ ತನ್ನ ರಾಜ್ಯವನ್ನು ಬಿಟ್ಟು, ನಂತರ ದಿಗಂಬರ ಜೈನ ಪಂಥವನ್ನು ಸೇರಿದನು. ಪ್ರಾಯಶ್ಚಿತ ಮಾರ್ಗವನ್ನು ಅನುಸರಿಸಿ, ಬಾಹುಬಲಿಯು ಜ್ಞಾನೋದಯ ಪಡೆಯುವವರೆಗೆ ಬೆತ್ತಲೆಯಾಗಿರಲು ನಿರ್ಧರಿಸಿದ.ಈ ಸ್ಥಳವನ್ನು ತಲುಪಲು, ಪ್ರವಾಸಿಗರು ಸುಮಾರು ೨೦ ನಿಮಿಷಗಳ ಕಾಲ ರತ್ನಗಿರಿ ಬೆಟ್ಟದ ಮೆಟ್ಟಿಲುಗಳನ್ನು ಏರಬೇಕಾಗುತ್ತದೆ. ಪ್ರವಾಸಿಗರು ಆರ್ದ್ರತೆಯಿಂದ ತಪ್ಪಿಸಿಕೊಳ್ಳಲು ಬೆಳಗಿನ ಸಮಯದಲ್ಲಿ ಭೇಟಿ ನೀಡಲು ಸೂಚಿಸಲಾಗಿದೆ. ಬೆಟ್ಟದ ಮೇಲೆ ಪ್ರವಾಸಿಗರಿಗೆ ಆಶ್ರಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇರುತ್ತವೆ. ಈ ಸ್ಥಳಕ್ಕೆ ಭೇಟಿ ನೀಡಿ ಪ್ರತಿಮೆಯನ್ನು ನೋಡ ಬಯಸುವ ಪ್ರಯಾಣಿಕರಿಗೆ ಬೆಳಗ್ಗೆ 8 ರಿಂದ 10 ಹಾಗು ಸಂಜೆ 6 ರಿಂದ 7 ಸೂಕ್ತ ಸಮಯವಾಗಿದೆ