ಭದ್ರಾವತಿ ಆಣೆಕಟ್ಟು ಇದನ್ನು ಭದ್ರಾ ಆಣೆಕಟ್ಟು ಯೋಜನೆ ಎಂದೂ ಕೂಡ ಕರೆಯಲಾಗುತ್ತಿದ್ದು ಭದ್ರಾವತಿ ನಗರದ ಸನಿಹದಲ್ಲಿದೆ. ಈ ಆಣೆಕಟ್ಟನ್ನು ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದು, ಈ ಪ್ರದೇಶದಲ್ಲೇ ಆಕರ್ಷಣೀಯ ಪ್ರವಾಸಿ ತಾಣವಾಗಿದೆ. 194 ಅಡಿ ಎತ್ತರದ ಈ ಆಣೆಕಟ್ಟನ್ನು ಕರ್ನಾಟಕದ ಮುಖ್ಯ ಎಂಜಿನೀಯರರಾದ ಎಮ.ವಿಶ್ವೇಶ್ವರಯ್ಯನವರು ನಿರ್ಮಿಸಿದ್ದಾರೆ. ಈ ಪ್ರದೇಶದ ನೀರಾವರಿ ಹಾಗು ಜಲ ವಿದ್ಯುತ್ ಉತ್ಪಾದನೆಗೆ ಈ ಆಣೆಕಟ್ಟು ಮಹತ್ವದ ಮೂಲವಾಗಿದೆ. ಆಣೆಕಟ್ಟು ಕೆಲವು ಕಾಡಿನಿಂದ ಆವೃತವಾದ ದ್ವೀಪಗಳು ಮತ್ತು ಬೆಟ್ಟಗಳಿಗೆ ಅಭಿಮುಖವಾಗಿ ನಿಂತಿದ್ದು, ವೀಕ್ಷಣೆಗೆ ಆಕರ್ಷಕ ದೃಶ್ಯಗಳನ್ನು ಒದಗಿಸುತ್ತದೆ. ಇಲ್ಲಿಯ ಅಹ್ಲಾದಕರ ವಾತವರಣವು ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಈ ಪ್ರದೇಶದಲ್ಲೇ ಅತಿ ಹೆಚ್ಚು ಭೇಟಿ ನೀಡಲ್ಪಡುವ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ಆಣೆಕಟ್ಟು ಲಕ್ಕವಳ್ಳಿ ಹಳ್ಳಿಯ ಅತಿ ಹತ್ತಿರದಲ್ಲಿರುವುದರಿಂದ ಇದನ್ನು ಲಕ್ಕವಳ್ಳಿ ಆಣೆಕಟ್ಟು ಎಂದೂ ಕೂಡ ಕರೆಯಲಾಗುತ್ತದೆ.