ಅಲ್ಸೂರ್ ಸರೋವರವು ನಗರದ ಈಶಾನ್ಯ ಭಾಗದಲ್ಲಿದ್ದು ಎಮ.ಜಿ.ರಸ್ತೆಗೆ ಹತ್ತಿರವಾಗಿದೆ. ಬೆಂಗಳೂರನ್ನು ಸಂಸ್ಥಾಪಿಸಿದ ಕೆಂಪೇಗೌಡರಿಂದ ಇದು ನಿರ್ಮಾಣವಾಗಿದೆ. 1.5 ಚ.ಕಿ.ಮೀ. ಹರಡಿರುವ ಈ ಸರೋವರವು ದ್ವೀಪಗಳಿಂದ ಸಿಂಗರಿಸಲ್ಪಟ್ಟಿದೆ. ಇಲ್ಲಿ ಗಣೆಶೋತ್ಸವವನ್ನು ಅಗಸ್ಟ ಮತ್ತು ಸೆಪ್ಟಂಬರಗಳಲ್ಲಿ ಅತಿ ಅದ್ದೂರಿಯಾಗಿ ಮಾಡಲಾಗುತ್ತದೆ. ಚುರುಕುಗೊಳಿಸುವಂತಹ ಚಟುವಟಿಕೆಯಾದ ಈಜಿಗಾಗಿ ಸಂಕೀರ್ಣವೊಂದು ಇಲ್ಲಿದ್ದು ಈಜಾಡಲು ಅನುಕೂಲವಾಗಿದೆ. ಅಲ್ಸೂರ್ ಸರೋವರದ ಬಳಿಯಿರುವ ಗುರುದ್ವಾರವು, ಬೆಂಗಳೂರಿನಲ್ಲೇ ದೊಡ್ಡದಾದ ಸಿಖ್ ಸಮುದಾಯದವರ ದೇವಸ್ಥಾನವಾಗಿದೆ. ಈ ಸರೋವರದಲ್ಲಿ ದೋಣಿ ವಿಹಾರವು ಜನಪ್ರಿಯವಾಗಿದೆ. ಇಲ್ಲಿನ ಬೋಟ್ ಕ್ಲಬ್ ವಿಹಾರಕ್ಕೆಂದು ದೋಣಿಗಳನ್ನು ಒದಗಿಸುತ್ತವೆ ಮತ್ತು ವಿಹರಿಸುವಾಗ ಅಲ್ಲಲ್ಲಿ ದ್ವೀಪಗಳಲ್ಲಿ ವಿರಾಮವನ್ನೂ ಕೂಡ ಕೊಡುತ್ತವೆ. ಸರೋವರವು 1.5 ಚ.ಕಿ.ಮೀ ಜಲಾನಯನ ಪ್ರದೇಶ ಹೊಂದಿದ್ದು ಮೂರು ಮೋರಿಗಳ ಮೂಲಕ ನೀರು ಹರಿದು ಬರುತ್ತದೆ. ಬಿಗಿಯಾದ ಕ್ರಮಗಳಿಂದ ಸರೋವರವನ್ನು ಸುಭದ್ರವಾಗಿ ನವೀಕರಣಗೊಳಿಸಲಾಗಿದೆ.ಈ ಸರೋವರವು ಕೇವಲ ಎಮ.ಜಿ. ರಸ್ತೆಯಿಂದ ಮಾತ್ರ ನಡೆಯಬಹುದಾದ ದೂರದಲ್ಲಿದೆ. ಹಲಸೂರಿನ ಹತ್ತಿರ ಮೆಟ್ರೊ ರೈಲನ್ನು ಯೋಜಿಸಲಾಗಿದೆ.