ಕರ್ನಾಟಕ ಉಚ್ಚ ನ್ಯಾಯಾಲಯವು ತನ್ನ ಸಾಂಪ್ರದಾಯಿಕ ಶೈಲಿಯ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. ಇದು ಬೆಂಗಳೂರಿನ ಅಂಬೇಡ್ಕರ ವೀಧಿಯಲ್ಲಿರುವ ವಿಧಾನ ಸೌಧದ ಹತ್ತಿರವಿರುವ ಶಾಸಕರ ಭವನದ ಎದುರುಗಡೆಯಿದೆ. ಅಠಾರಾ ಕಚೇರಿ ಎಂದು ಕರೆಯಲ್ಪಡುವ ನ್ಯಾಯಾಲಯದ ಈ ಕಟ್ಟಡವನ್ನು ಕೆಂಪು ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಮೊದಲಿಗೆ ಮೈಸೂರು ರಾಜ್ಯ ಎಂದು ಕರೆಯಲ್ಪಡುತ್ತಿದ್ದ ಇಲ್ಲಿ, ಇದನ್ನು ಕರ್ನಾಟಕದ ಅತಿ ಉಚ್ಚ ನ್ಯಾಯಾಲಯವಾಗಿ 1884 ರಲ್ಲಿ ಸ್ಥಾಪಿಸಲಾಯಿತು.
1921 ರಲ್ಲಿ ಇದನ್ನು ಕರ್ನಾಟಕ ಉಚ್ಚ ನ್ಯಾಯಾಲಯ ಎಂದು ಮರುನಾಮಕರಣ ಮಾಡಲಾಯಿತು. ಅಠಾರಾ ಕಚೇರಿಯ ಶಬ್ದಾರ್ಥವು 18 ಕಛೇರಿಗಳೆಂದಾಗುತ್ತದೆ. ಈ ಕಟ್ಟಡವು ನವ ಅಭಿಜಾತ ಶೈಲಿಯ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ. ಮೊದಲಿಗೆ ಒಲ್ಡ್ ಪಬ್ಲಿಕ್ ಹೌಸಸ್ ಎಂದು ಕರೆಯಲ್ಪಡುತ್ತಿದ್ದ ಈ ಕಟ್ಟಡವು, ಮೈಸೂರಿನ ಟಿಪ್ಪು ಸುಲ್ತಾನನ ಅರಮನೆಯಿಂದ 18 ಸಾರ್ವಜನಿಕ ಇಲಾಖೆಗಳು ಇಲ್ಲಿ ವರ್ಗಾವಣೆಯಾದನಂತರ ಅಠಾರಾ ಕಚೇರಿ ಎಂದು ಕರೆಯಲ್ಪಟ್ಟಿತು. ಈ ಕಟ್ಟಡವು ಮಾನವನಿಂದ ನೆಲಸಮಗೊಳ್ಳುವಂತಹ ಸ್ಥಿತಿಯಲ್ಲಿತ್ತು. ಆದರೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಲಾಗಿ, ನಾಶಹೊಂದುವಿಕೆಯಿಂದ ಇದನ್ನು ರಕ್ಷೀಸಲಾಯಿತು.


Click it and Unblock the Notifications