ಆರ್ಕಿಯಲ್ಲಿರುವ ಕುಣಿಹಾರ್ ಕಣಿವೆ ಸೋಲನ್ ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಅತಿ ಮಹತ್ವದ್ದಾಗಿದೆ. ಇದನ್ನು ಹತ್ಕೋಟ್ ಮತ್ತು ಚೋಟಿ ವಿಲಾಯತ್ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಮೇಲ್ನೋಟಕ್ಕೆ ಈ ಕಣಿವೆಯ ಆಕಾರ ಹೂ ಮಾಲೆಯನ್ನೇ ಹೋಲುವುದರಿಂದ ಭಾರತದ ಮಾಜೀ ಪ್ರಧಾನಿ ರಾಜೀವಗಾಂಧಿ ಈ ಪ್ರದೇಶವನ್ನು ಕುಣಿಹಾರ್ ಎಂದು ಕರೆದರು. 1154 ರಲ್ಲಿ ಜಮ್ಮುವಿನ ಅಭೋಜ್ದೇವ್ ಮತ್ತು ರಘುಬನ್ಸಿ ರಜಪೂತ್ ಈ ಕಣಿವೆಯನ್ನು ಅನ್ವೇಷಿಸಿರುವುದಾಗಿ ಐತಿಹಾಸಿಕ ದಾಖಲೆಗಳು ಹೇಳುತ್ತವೆ. ಈ ಕಣಿವೆ ವೀಕ್ಷಣೆಗೆ ಬಂದವರು ಇಲ್ಲಿನ ಕುಲ್ಜಾದೇವಿ ಮತ್ತು ದಾನೋದೇವಿಯರ ದೇವಸ್ಥಾನನಗಳಿಗೂ ಭೇಟಿ ನೀಡಬಹುದು. ಕುಣಿಹಾರ್ ತಾಲಾಬ್ (ಸರೋವರ) ಇಲ್ಲಿನ ಮತ್ತೊಂದು ಆಕರ್ಷಣೆ.