ಗೋದಾವರಿ ಹಾಗೂ ಮಂಜಿರಾ ನದಿ ಸೇರುವ ತಾಣದಲ್ಲಿ ಈ ಧಾರ್ಮಿಕ ಶಕ್ತಿ ದೇವತೆಯಾದ ಬಸಾರ ಸರಸ್ವತಿ ದೇವಸ್ಥಾನವಿದೆ. ಬಸಾರ ಹಳ್ಳಿಯಲ್ಲಿ ಈ ದೇವಾಲಯವಿದೆ. ಈ ದೇವಾಲಯವು, ದೇವಿ ಸರಸ್ವತಿಗೆ ಮೀಸಲಾಗಿದೆ. ಜ್ಞಾನ ಹಾಗೂ ಅರಿವಿನ ದೇವತೆ ಸರಸ್ವತಿಯ ಆಲಯ ಇದಾಗಿದೆ. ದೇವಿ ಸರಸ್ವತಿಯ ಈ ಆಲಯ ದೇಶದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ.
ಹಿಂದು ಧರ್ಮೀಯರ ನಂಬಿಕೆ ಪ್ರಕಾರ, ಋಷಿ ವೇದವ್ಯಾಸರಿಂದ ಈ ದೇವಾಲಯ ನಿರ್ಮಾಣಗೊಂಡಿದೆ. ತಮ್ಮ ಧ್ಯಾನ ಹಾಗೂ ತಪಸ್ಸಿಗಾಗಿ ಅವರು ಈ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದರು. ವೇದವ್ಯಾಸರು ಇಲ್ಲಿ ದೇವಿಯ ಮೂರು ಮೂರ್ತಿಯನ್ನು ಸಿದ್ಧಪಡಿಸಿದ್ದರು. ಇದಕ್ಕೆ ಸರಸ್ವತಿ, ಲಕ್ಷ್ಮಿ ಹಾಗೂ ಕಾಳಿ ಎಂದು ಹೆಸರಿಟ್ಟಿದ್ದರು. ಇದನ್ನು ಅವರು ಮರಳಿನಿಂದ ಸಿದ್ದಪಡಿಸಿದ್ದರು.
ಈ ದೇವಾಲಯವನ್ನು ಅವರು ನಿರ್ಮಿಸಲಿಲ್ಲ. ಬದಲಾಗಿ ಚಾಲುಕ್ಯ ರಾಜರು ದೇವಿ ಸರಸ್ವತಿಗೆ ಗೌರವ ಸಲ್ಲಿಸಲು ನಿರ್ಮಿಸಿದರು. ಇಲ್ಲಿ ಇಂದು ಪಂಚಮಿ ಹಾಗೂ ನವರಾತ್ರಿ ಉತ್ಸವ ಅದ್ದೂರಿಯಾಗಿ ಆಚರಣೆ ಆಗುತ್ತದೆ. ದೇವಾಲಯದಲ್ಲಿ ಅಪರೂಪದ ವಿಶಿಷ್ಟ ಕಲೆ ಅಕ್ಷರ ಗಣ ಕೂಡ ಇಲ್ಲಿ ನಡೆಯುವ ಪ್ರಮುಖ ಕಾರ್ಯ. ಮಕ್ಕಳ ಪ್ರಾಥಮಿಕ ಅಕ್ಷರಾಭ್ಯಾಸ ಇಲ್ಲಿಂದಲೇ ಆರಂಭವಾಗಲಿ ಎನ್ನುವುದು ಹಲವರ ನಂಬಿಕೆ ಆಗಿರುತ್ತದೆ. ಅದನ್ನು ಕೂಡ ಈಡೇರಿಸುವ ಕಾರ್ಯ ಆಗುತ್ತಿದೆ. ವ್ಯಾಸಂಗದಲ್ಲಿ ಉನ್ನತಿ ಸಿಗುತ್ತದೆ ಎನ್ನುವುದು ಹಿಂದು ಧಾರ್ಮಿಕ ನಂಬಿಕೆ ಉಳ್ಳವರ ಭಾವನೆ.