ಶ್ರೀವಿಲ್ಲಿಪುತೂರ್ ನಿಂದ ಕೇವಲ 45 ಕಿ ಮೀ ಇರುವ ಈ ಸ್ಥಳದ ಶಂಕರ ನಾರಾಯಣ ದೇವಾಲಯ ಜನಪ್ರಿಯವಾಗಿದೆ.ಇಲ್ಲಿನ ಮಹತ್ತಾದ ವಾಸ್ತುಶಿಲ್ಪವನ್ನು ನೋಡಲು ಶ್ರೀವಿಲ್ಲಿಪುತೂರ್ ಗೆ ಬಂದವರು ಈ ಸ್ಥಳವನ್ನು ಭೇಟಿ ನೀಡಲೇಬೇಕು.ತಮಿಳುನಾಡಿನ ತಿರುನೆಲ್ವೆಲ್ಲಿ ಜಿಲ್ಲೆಯಲ್ಲಿ ಈ ದೇವಾಲಯವಿದೆ.ಸ್ಥಳೀಯರ ಪ್ರಕಾರ ಕ್ರಿ, ಶ 900 ರಲ್ಲಿ ಉಕಿರ ಪಾಂಡ್ಯನ್ ಇಂದ ಈ ದೇವಾಲಯ ಕಟ್ಟಲಾಯಿತು.ದೇವಸ್ಥಾನದ ಆವರಣದಲ್ಲಿ ನಡೆಯುವ ಆದಿ ತಬಸು ಹಬ್ಬಕ್ಕೆ ಈ ದೇವಾಲಯ ಹೆಸರುವಾಸಿಯಾಗಿದೆ.ಈ ದೇವಸ್ಥಾನದಲ್ಲಿ ಅದರದೇ ಆಸ್ತಿ ಇದೆ.ಮತ್ತು ಸ್ಥಳೀಯರಿಂದ ಇದು ಬಹಳ ಶ್ರೇಯಸ್ಕರವಾದ ದೇವಾಲಯ ಎಂದು ಪರಿಗಣಿಸಲಾಗಿದೆ.ಈ ದೇವಸ್ಥಾನದ ಬೌಗೋಳಿಕ ಎತ್ತರ 52 ಮೀಟರ್.ಆಗಸ್ಟ್ ತಿಂಗಳಿನಲ್ಲಿ 12 ದಿನ ಆದಿ ತಬಸು ಹಬ್ಬ ನಡೆಯುತ್ತದೆ.ಅಷ್ಟೇಅಲ್ಲ ಇದರ ಸುತ್ತಮುತ್ತಲು ಸಾಕಷ್ಟು ಪಿಕ್ನಿಕ್ ಸ್ಥಳಗಳಿವೆ.