ಕರ್ನೂಲ್ ವಸ್ತು ಸಂಗ್ರಹಾಲಯ ರೂಪುಗೊಳಿಸಿದ್ದು ಭಾರತೀಯ ಪುರಾತತ್ವ ಸರ್ವೇ ಇಲಾಖೆ. ಕರ್ನೂಲ್ ಪ್ರದೇಶದಲ್ಲಿ ಹಲವಾರು ಐತಿಹಾಸಿಕ ಮತ್ತು ಪುರಾತತ್ವ ಮಹತ್ವವುಳ್ಳ ಕಲಾಕೃತಿಗಳನ್ನು ಅಗೆದು ತೆಗೆಯಲಾಗಿದೆ. ಇದನ್ನು ಮನದಲ್ಲಿಟ್ಟುಕೊಂಡು ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗಿದೆ. ಹಂದ್ರಿ ನದಿಯ ದಂಡೆಯ ಮೇಲೆ ಕರ್ನೂಲ್ ವೈದ್ಯಕೀಯ ಕಾಲೇಜಿನ ಪಕ್ಕದಲ್ಲಿ ವಸ್ತುಸಂಗ್ರಹಾಲಯ ಸ್ಥಾಪನೆಗೊಂಡಿದೆ. ಸಂಗಮೇಶ್ವರ, ಅಲಂಪುರ, ಶ್ರೀಶೈಲಂ ಮುಂತಾದ ದೇವಸ್ಥಾನಗಳ ಸುತ್ತಮುತ್ತ ದೊರಕಿದ ಮುರಿದ ಕಲಾಕೃತಿಗಳನ್ನು ಸ್ಥಳೀಯ ದಳವಾಯಿಗಳು ಬಳಸಿದ ಆಯುಧಗಳನ್ನು ಈ ಸಂಗ್ರಹಾಲಯದಲ್ಲಿ ಕಾದಿಡಲಾಗಿದೆ. ಈ ಸಂಗ್ರಹಾಲಯ ಕೋಟ್ಲ ವಿಜಯ ಭಾಸ್ಕರ್ ರೆಡ್ಡಿ ಸ್ಮಾರಕದ ಹತ್ತಿರದಲ್ಲಿದೆ.