ಕರ್ನೂಲ್ ಕೋಟೆಗೆ ಕೊಂಡ ರೆಡ್ಡಿ ಬುರುಜು ಎಂಬ ಹೆಸರೂ ಇದ್ದು ಈ ಕೋಟೆ ಕರ್ನೂಲ್ ನಗರದ ಪ್ರಧಾನ ಹೆಗ್ಗುರುತು. ನಗರದ ಮಧ್ಯಭಾಗದಲ್ಲಿರುವ ಈ ಕೋಟೆಯನ್ನು ಕಟ್ಟಿಸಿದ್ದು ವಿಜಯನಗರ ಸಾಮ್ರಾಜ್ಯದ ದೊರೆ ಅಚ್ಯುತ ದೇವರಾಯ. ಭವ್ಯ ವಾಸ್ತು ಶಿಲ್ಪದ ಭಾಗವಾಗಿ ಉಳಿದಿರುವುದು ಕೊಂಡ ರೆಡ್ಡಿ ಬುರುಜು. ಈ ಕೋಟೆಯ ಬಂಧಿಖಾನೆಯಲ್ಲಿಯೇ ಕೊಂಡ...
ಕರ್ನೂಲ್ ವಸ್ತು ಸಂಗ್ರಹಾಲಯ ರೂಪುಗೊಳಿಸಿದ್ದು ಭಾರತೀಯ ಪುರಾತತ್ವ ಸರ್ವೇ ಇಲಾಖೆ. ಕರ್ನೂಲ್ ಪ್ರದೇಶದಲ್ಲಿ ಹಲವಾರು ಐತಿಹಾಸಿಕ ಮತ್ತು ಪುರಾತತ್ವ ಮಹತ್ವವುಳ್ಳ ಕಲಾಕೃತಿಗಳನ್ನು ಅಗೆದು ತೆಗೆಯಲಾಗಿದೆ. ಇದನ್ನು ಮನದಲ್ಲಿಟ್ಟುಕೊಂಡು ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗಿದೆ. ಹಂದ್ರಿ ನದಿಯ ದಂಡೆಯ ಮೇಲೆ ಕರ್ನೂಲ್ ವೈದ್ಯಕೀಯ...
ಜಗನ್ನಾಥ ಗಟ್ಟು ದೇವಸ್ಥಾನ ಕರ್ನೂಲಿನ ಪ್ರಸಿದ್ದ ಪ್ರವಾಸಿ ತಾಣ. ಇದು ಪ್ರಸಿದ್ದವಾಗಿದ್ದು ಶಿವ ದೇವಸ್ಥಾನದಿಂದ ಮತ್ತು ಕರ್ನೂಲಿನ ಬಿ.ತಂಡ್ರಪಾಡುವಿನಲ್ಲಿ ಇದು ನೆಲೆ ನಿಂತಿದೆ. ಇಲ್ಲಿರುವ ಲಿಂಗದ ಹಿಂದಿರುವ ಇತಿಹಾಸದಿಂದ ಇದು ಪ್ರಸಿದ್ದವಾಗಿದೆ. ದಂತಕಥೆಗಳ ಪ್ರಕಾರ ಈ ದೇವಸ್ಥಾನದಲ್ಲಿರುವ ಶಿವಲಿಂಗ ಪಾಂಡವ ಯುವರಾಜ ಭೀಮ ತಂದು...
ಕೋಟ್ಲಾ ವಿಜಯ ಭಾಸ್ಕರ ರೆಡ್ಡಿ ನೆನಪಿನ ಸ್ಮಾರಕವನ್ನು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಯ ನೆನಪಿಗೆ ಅರ್ಪಿಸಲಾಗಿದೆ. ಇವರು ಮೂಲತಃ ಕರ್ನೂಲ್ ನವರಾಗಿದ್ದು ಕೇವಲ ಆಂದ್ರದಲ್ಲಷ್ಟೇ ಅಲ್ಲ ಇಡೀ ದೇಶದಲ್ಲಿಯೂ ಪ್ರಸಿದ್ದ ರಾಜಕಾರಣಿಯಾಗಿದ್ದರು. ದೊಡ್ಡ ಸಮೂಹವೊಂದರ ನಾಯಕನಾಗಿದ್ದ ಇವರನ್ನು ಜನ ಪ್ರೀತಿಸುತ್ತಿದ್ದರು ಮತ್ತು...
ಬಾಳಾ ಸಾಯಿಬಾಬಾ ದೇವಸ್ಥಾನ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ ಹತ್ತಿರದಲ್ಲಿದೆ. ಇದು ಕರ್ನೂಲಿನ ನೂತನ ಮಾನವ ದೇವತೆ ಶ್ರೀ ಬಾಳಾ ಸಾಯಿ ಬಾಬಾ ನಿಗೆ ಅರ್ಪಿತವಾಗಿದೆ. ಇತ್ತೀಚೆಗೆ ಶ್ರೀ ಬಾಳಾ ಸಾಯಿ ಬಾಬಾ ಮಾನವ ದೇವತೆಗೆ ಹೆಚ್ಚಿನ ಪ್ರಾಮುಖ್ಯತೆ ಬರುತ್ತಿದ್ದು ಇವರಿಗೆ ಅರ್ಪಿತವಾದ ದೇವಸ್ಥಾನಕ್ಕೆ ಹೆಚ್ಚೆಚ್ಚು ಭಕ್ತರು...
ಕರ್ನೂಲಿನ ಶಿರಡಿ ಸಾಯಿ ಬಾಬಾ ದೇವಸ್ಥಾನ 70 ವರ್ಷಗಳ ಹಿಂದೆ ಕಟ್ಟಿಸಲಾಗಿದ್ದು, ಭಿನ್ನವಾದ ಸ್ಥಳವಾಗಿದೆ. ಇದೊಂದು ಅತ್ಯಂತ ದೊಡ್ಡ ಸಾಯಿ ಬಾಬಾ ಮಂದಿರವಾಗಿದ್ದು ಸುಮಾರು 1.5 ಎಕರೆ ವಿಸ್ತಾರದಲ್ಲಿ ಹಬ್ಬಿಕೊಂಡಿದೆ. ತುಂಗಭದ್ರ ದಂಡೆಯ ಮೇಲೆ ಈ ಮಂದಿರವನ್ನು ಕಟ್ಟಿದ್ದು ಒಬ್ಬ ಬಟ್ಟೆ ತೊಳೆಯುವ ಮನುಷ್ಯ. ಇದರ ಆಕಾರ...
ವೆಂಕಣ್ಣ ಬಾವಿ ದೇವಸ್ಥಾನ ಕರ್ನೂಲಿನಲ್ಲಿರುವ ಪ್ರಸಿದ್ದ ಪಿಕ್ನಿಕ್ ಸ್ಥಳಗಳಲ್ಲೊಂದು. ಸ್ಥಳೀಯವಾಗಿ ಈ ದೇವಸ್ಥಾನ ಅಷ್ಟೊಂದು ಪ್ರಸಿದ್ದವಾಗಿಲ್ಲ. ಇಲ್ಲಿ ೆರಡು ಮಂದಿರಗಳಿದ್ದು ಒಂದು ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಶಿವನ ದೇವಸ್ಥಾನ. ನಿಧಿಚೋರರು ವ್ಯರ್ಥಪ್ರಯತ್ನ ನಡೆಸಿದ್ದರಿಂದ ದೇವಸ್ಥಾನ ಧ್ವಂಸಗೊಂಡಿದೆ. ದೇವಸ್ಥಾನದ...
ನಲ್ಲಮಲ್ಲ ಅರಣ್ಯ ದಕ್ಷಿಣ ಭಾರತದಲ್ಲಿನ ಅತ್ಯಂತ ದೊಡ್ಡ ಪ್ರಶಾಂತ ಕಾಡುಗಳಲ್ಲೊಂದು. ಪಶ್ಚಿಮ ಘಟ್ಟದ ಭಾಗವಾದ ನಲ್ಲಮಲ ಬೆಟ್ಟದಲ್ಲಿ ಈ ಅರಣ್ಯವಿದೆ. ಈ ಅರಣ್ಯ ಕರ್ನೂಲ್, ಗುಂಟೂರು, ಕಡಪ, ಮೆಹಬೂಬ್ ನಗರ ಮತ್ತು ಪ್ರಕಾಶಂ ಈ ಐದು ಜಿಲ್ಲೆಗಳಲ್ಲಿ ಆವರಿಸಿದೆ. ಹಲವು ವರ್ಷಗಳ ಹಿಂದೆ ಈ ಅರಣ್ಯ ಸಮೃದ್ದವಾಗಿತ್ತು. ಪ್ರಸಿದ್ದ...