ಶಿವರಾಜಪುರವು ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿನ ಒಂದು ಸಣ್ಣ ಪಟ್ಟಣ. ಐತಿಹಾಸಿಕವಾಗಿ ಇಲ್ಲಿ ರಾಜ ಸತಿ ಪ್ರಸಾದನು ತನ್ನ ರಾಣಿಯ ನೆನಪಿಗೆ ಇಲ್ಲಿ ಸುಂದರ ದೇವಾಲಯವನ್ನು ಕಟ್ಟಿಸಿದ ನಂತರ ಇದು ಪ್ರಸಿದ್ಧವಾಯಿತು. ಈ ದೇವಾಲಯವು ಖೀಡೇಶ್ವರ ದೇವಾಲಯವೆಂದು ಹೆಸರಾಯಿತು. ಇದು ತನ್ನ ಶಿಲ್ಪಕಲೆಗೆ ಹೆಸರುವಾಸಿಯಾಗಿದೆ. ಇದನ್ನು ಒಂದು ದಿನದಲ್ಲಿ ಕಟ್ಟಿ ಮುಗಿಸಲಾಯಿತು ಎಂದು ಇತಿಹಾಸಕಾರರು ಹೇಳುತ್ತಾರೆ. ಇದು ಗಂಗಾ ನದಿಯ ತಟದಲ್ಲಿದೆ. ಇಲ್ಲಿಗೆ ಸಮೀಪದಲ್ಲಿ ಇನ್ನೂ ಹಲವು ದೇವಾಲಯಗಳು ಮತ್ತು ಕಾಲೇಜುಗಳು ಇವೆ.