ಭಾರತದ ಬಲಿಷ್ಟ ಕೋಟೆಗಳಲ್ಲಿ ಅಲೀಗಢದ ಕೋಟೆಯು ಒಂದೆಂದು ಹೇಳಲಾಗುತ್ತದೆ. ಇದನ್ನು ಇಬ್ರಾಹಿಂ ಲೋಧಿಯ ಕಾಲದಲ್ಲಿದ್ದ ಇಲ್ಲಿನ ಗವರ್ನರನ ಮಗ ಕಟ್ಟಿಸದನೆಂದು ಹೇಳಲಾಗುತ್ತದೆ. ಇದು ಜಿ ಟಿ ರಸ್ತೆಯಲ್ಲಿದೆ. ಬಹುಭುಜಾಕೃತಿಯ ಈ ಕೋಟೆಯ ಸುತ್ತ ಕಂದಕವಿದೆ.
ಕಾಲಾಂತರದಲ್ಲಿ ಕೋಟೆಯನ್ನು ಹಲವು ಬಾರಿ ಮರುನಿರ್ಮಾಣ ಮಾಡಲಾಗಿದೆ. 18ನೇ ಶತಮಾನದಲ್ಲಿ ಒಂದನೆ ಮಾಧವರಾವ್ ಶಿಂಧೆಯ ಕಾಲದಲ್ಲಿ ಈ ಕೋಟೆ ಸೈನಿಕರಿಗೆ ಯುರೋಪಿಯನ್ ಯುದ್ಧ ತಂತ್ರಗಳನ್ನು ಕಲಿಸುವ ಮುಖ್ಯ ಕೇಂದ್ರವಾಗಿತ್ತು. 1857ರಲ್ಲಿ ನಡೆದ ಬ್ರಿಟೀಷರ ವಿರುದ್ಧದ ದಂಗೆ ಕೂಡ ಇಲ್ಲಿಯೇ ನಡೆದದ್ದು.
ಈ ಕೋಟೆಯಲ್ಲಿ ಭಾರತೀಯ ಮತ್ತು ಫ್ರೆಂಚ್ ವಾಸ್ತು ಶೈಲಿಯ ಮಿಶ್ರಣವನ್ನು ಕಾಣಬಹುದು. ಇದು ಈಗ ಅಲೀಗಢ ಮುಸ್ಲಿಂ ವಿವಿಯ ಸಸ್ಯಶಾಸ್ತ್ರ ವಿಭಾಗದ ಮೇಲ್ವಿಚಾರಣೆಯಲ್ಲಿದೆ. ಕೋಟೆಯ ಒಳಗಡೆ ಸಸ್ಯಶಾಸ್ತ್ರೀಯ ಉದ್ಯಾನವಿದ್ದು ಇದ್ದು ಇಲ್ಲಿ ಹಲಬಗೆಯ ಸಸ್ಯಗಳನ್ನು ಕಾಣಬಹುದು.