ಪ್ರಸ್ತುತ ಆಂಧ್ರ ಪ್ರದೇಶದ ನಲಗೊಂಡ ಜಿಲ್ಲೆಯ ಭಾಗವಾಗಿರುವ ನಾಗಾರ್ಜುನಕೊಂಡವು ಪುರಾತನ ಬೌದ್ಧ ದ್ವೀಪ-ಪಟ್ಟಣವಾಗಿತ್ತು. ಈ ಪಟ್ಟಣವು ನಾಗರ್ಜುನಸಾಗರಕ್ಕೆ ಅತಿ ಸಮೀಪದಲ್ಲಿದ್ದು ಹೈದರಾಬಾದ್ ನಿಂದ ಕೇವಲ 150 ಕಿಮೀ ದೂರದಲ್ಲಿದೆ.
1960 ರಲ್ಲಿ ನಾಗರ್ಜುನಸಾಗರ್ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ಬೆಟ್ಟವು ಮುಳುಗಿದ್ದರ ಪರಿಣಾಮವಾಗಿ ಈ ದ್ವೀಪ- ಪಟ್ಟಣವು ನಿರ್ಮಿತವಾಯಿತು. ಈ ಪಟ್ಟಣವು ಭಾರತದ ಶ್ರೀಮಂತ ಬೌದ್ಧ ಕ್ಷೇತ್ರವೆಂದು ಪ್ರಸಿದ್ಧವಾಗಿದ್ದು ದೇಶಾದ್ಯಂತ ಪ್ರವಾಸಿಗಳನ್ನು ಆಕರ್ಷಿಸುತ್ತದೆ. ಈಗ ಸರೋವರದ ನೀರಿನಲ್ಲಿ ಮುಳುಗಿರುವ ಆ ಬೆಟ್ಟವು ಪ್ರಾಚೀನ ಕಾಲದಲ್ಲಿ ಶ್ರೀ ಪರ್ವತ ಎಂದು ಕರೆಯಲ್ಪಡುತ್ತಿತ್ತು. ಭಗವಾನ್ ಬುದ್ಧನ ಬೋಧನೆಗಳ ಪ್ರಚಾರಕ್ಕಾಗಿ ಶ್ರಮಿಸಿದ ಬೌದ್ಧ ಸನ್ಯಾಸಿ ನಾಗಾರ್ಜುನನ ಗೌರವಾರ್ಥವಾಗಿ ಈ ದ್ವೀಪಕ್ಕೆ ನಾಗಾರ್ಜುನಕೊಂಡ ಎಂದು ಹೆಸರಿಸಲಾಗಿದೆ. ಈಗ ಪಟ್ಟಣವು ಬುದ್ಧನ ಜೀವಿತಾವಧಿ ಹಾಗೂ ನಂತರದ ಕಾಲದ ಬಗೆಗಿನ ಕಲಿಕಾ ಕೇಂದ್ರವಾಗಿ ಬಳಕೆಯಾಗುತ್ತಿದೆ. ಇದು ಅನೇಕ ಬೌದ್ಧಮತೀಯ ವಿರಕ್ತಗೃಹಗಳು ಹಾಗೂ ವಿಶ್ವವಿದ್ಯಾಲಯಗಳು ಮತ್ತು ಅಧ್ಯಯನಕ್ಕಾಗಿ ಈ ಸಂಸ್ಥೆಗೆ ಬಂದಿರುವ ವಿದ್ಯಾರ್ಥಿಗಳನ್ನು ಹೊಂದಿದೆ.