ಕಾವೇರಿ ನದಿ ದಂಡೆಯಲ್ಲಿರುವ ಮುತ್ತತ್ತಿ ಆಂಜನೇಯ ದೇವಸ್ಥಾನವು ಪ್ರವಾಸಿಗರು ಭೇಟಿ ನೀಡಲೇಬೇಕಾದಂತಹ ಸ್ಥಳವಾಗಿದೆ. ಹಿಂದೂ ಧರ್ಮದ ಪ್ರಕಾರ ಭಾರಿ ಪರಾಕ್ರಮದ ದೇವರೆಂದೇ ಹೆಸರಾದ ಹನುಮಂತನನ್ನು ಈ ದೇವಸ್ಥಾನದಲ್ಲಿ ಪೂಜಿಸಲಾಗುತ್ತದೆ. ಜನಪ್ರಿಯ ಪುರಾಣ ಕಥೆಯಲ್ಲಿ ಈ ದೇವಸ್ಥಾನದ ಕುರಿತು ಕಥೆಯೊಂದಿದೆ. ಹಿಂದೂ ದೇವರು ಶ್ರೀರಾಮನ ಹೆಂಡತಿ ಸೀತಾದೇವಿಯು ತನ್ನ ಉಂಗುರವನ್ನು ಕಾವೇರಿ ನದಿಯಲ್ಲಿ ಕಳೆದುಕೊಂಡಳಂತೆ ಆಗ ದೇವಸ್ಥಾನವಿರುವ ಸ್ಥಳದಲ್ಲಿ ಹನುಮಂತನು ಕಾವೇರಿ ನದಿ ನೀರನ್ನು ಮಥಿಸಿ ಆ ಉಂಗುರವನ್ನು ಹುಡುಕಿಕೊಟ್ಟನೆಂಬ ಪ್ರತೀತಿಯಿದೆ.