ಭಾರತದ ದಕ್ಷಿಣದಲ್ಲಿರುವ ರಾಜ್ಯ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಒಂದು ಸಣ್ಣ ಪಟ್ಟಣ ಮಂತ್ರಾಲಯ. ತುಂಗಭದ್ರಾ ನದಿಯ ದಂಡೆಯ ಮೇಲೆ ಸ್ಥಾಪಿತವಾಗಿರುವ ಈ ಪಟ್ಟಣ ಕರ್ನಾಟಕದ ಜೊತೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಇದನ್ನು ಜನಪ್ರಿಯವಾಗಿ ಮಂಚಾಲೆ ಎಂತಲೂ ಕರೆಯುವದುಂಟು.
ಗುರು ರಾಘವೇಂದ್ರ ಸ್ವಾಮಿಯಿಂದ ರೂಪಿಸಲ್ಪಟ್ಟ ವೃಂದಾವನವಿರುವದರಿಂದ ಈ ಪಟ್ಟಣವು ತೆಲುಗರಲ್ಲಿ ಅತ್ಯಂತ ಜನಪ್ರಿಯವಾಗಿದೆ. ಪರಮ ಪೂಜ್ಯ ಗುರುಗಳು, ಶ್ರೀ ಮಧ್ವಾಚಾರ್ಯರ ಅನುಯಾಯಿಗಳಾಗಿದ್ದು ಮಧ್ವ ಪಂಥ ಪಾಲಕರಾಗಿದ್ದರು. ಗುರು ರಾಘವೇಂದ್ರ ಸ್ವಾಮಿ ಕಳೆದ 339 ವರ್ಷಗಳ ಕಾಲ ದಕ್ಷಿಣದ ಈ ವೃಂದಾವನದಲ್ಲಿ ವಾಸಿಸುತ್ತಿದ್ದು ಮುಂದಿನ 361 ವರ್ಷಗಳ ಕಾಲ ಈ ಸ್ಥಳದಲ್ಲೇ ಇರುವರೆಂಬ ನಂಬಿಕೆ ಇಲ್ಲಿನ ಸ್ಥಳೀಯರಿಗಿದೆ. ಗುರುಗಳು ವೃಂದಾವನ ಪ್ರವೇಶಿಸಿದ ಸಂದರ್ಭದಲ್ಲಿ ತಾವು ಇನ್ನು 700 ವರ್ಷಗಳ ಕಾಲ ಈ ಸ್ಥಳದಲ್ಲೇ ವಾಸಿಸುವದಾಗಿ ಪ್ರಕಟಿಸಿದ್ದರು ಎಂತಲೂ ನಂಬಲಾಗುತ್ತದೆ. ಈ ಕಾರಣಕ್ಕಾಗಿ, ಮಂತ್ರಾಲಯವು ದೇಶದ ಹಿಂದೂಗಳ ಪವಿತ್ರ ಪಟ್ಟಣವೆಂದು ಪರಿಗಣಿಸಲಾಗಿದೆ.
ಮಂತ್ರಾಲಯದಲ್ಲಿ ಆಸಕ್ತಿ ಹುಟ್ಟಿಸುವಂತಹ ಸ್ಥಳಗಳೆಂದರೆ, ಶ್ರೀ ಗುರು ರಾಘವೇಂದ್ರ ಸ್ವಾಮಿ ದೇವಸ್ಥಾನ, ಬಿಕ್ಷಾಲಯ ಮತ್ತು ಪಂಚಮುಖಿ ಆಂಜನೇಯ ದೇವಸ್ಥಾನ. ಮಂತ್ರಾಲಯದಲ್ಲಿ ವಿಮಾನನಿಲ್ದಾಣವಿಲ್ಲ ಆದರೆ ರಸ್ತೆ ಮತ್ತು ರೈಲುಗಳ ಮೂಲಕ ಸುಲಭವಾಗಿ ಇಲ್ಲಿಗೆ ಬರಬಹುದು. ರೈಲ್ವೆ ನಿಲ್ದಾಣವು ನಗರದ ಕೇಂದ್ರದಿಂದ ಸುಮಾರು 16 ಕಿ.ಮಿ. ದೂರದಲ್ಲಿದೆ. ಮಂತ್ರಾಲಯ ತಲುಪಲು ಅನೇಕ ಸರ್ಕಾರಿ ಬಸ್ಸುಗಳು ಹಾಗೂ ಖಾಸಗಿ ಬಸ್ಸುಗಳ ವ್ಯವಸ್ಥೆಯೂ ಇದೆ. ಪಟ್ಟಣವು ತನ್ನ ಭೌಗೋಳಿಕ ಸ್ಥಾನದಿಂದಾಗಿ ಉಷ್ಣವಲಯದ ಹವಾಗುಣವನ್ನು ಹೊಂದಿದ್ದು ಬಹಳ ಬಿಸಿ ಮತ್ತು ಶುಷ್ಕ ಬೇಸಿಗೆಯನ್ನೂ ಮತ್ತು ಅಷ್ಟೇನೂ ಚಳಿ ಇಲ್ಲದ ಚಳಿಗಾಲವನ್ನು ಅನುಭವಿಸುತ್ತದೆ.