ಆಂಧ್ರದ ಸ್ಥಳೀಯ ಭಾಷೆಯಲ್ಲಿ ಬಿಚಾಲಿ ಎಂತಲೂ ಕರೆಯಲ್ಪಡುವ ಭಿಕ್ಷಾಲಯವು ಮಂತ್ರಾಲಯಂನಿಂದ ಸುಮಾರು 20 ಕಿಮೀ ದೂರದಲ್ಲಿದೆ. ಶ್ರೀ ಅಪ್ಪಣ್ಣಾಚಾರ್ಯರು ತಮ್ಮ ಜೀವನದ ಹೆಚ್ಚು ಭಾಗವನ್ನು ಇಲ್ಲಿ ಕಳೆದಿದ್ದರು ಎಂಬ ಕಾರಣಕ್ಕೆ ಈ ಸ್ಥಳವು ಪ್ರಸಿದ್ಧವಾಗಿದೆ. ಶ್ರೀ ಅಪ್ಪಣ್ಣಾಚಾರ್ಯರು ಒಬ್ಬ ಉತ್ಕಟ ಭಕ್ತ ಹಾಗೂ ಗುರು ರಾಘವೇಂದ್ರ ಸ್ವಾಮಿಯವರ ವಿದ್ಯಾರ್ಥಿಯಾಗಿದ್ದರು. ಗುರು ರಾಘವೇಂದ್ರ ಸ್ವಾಮಿಗಳು 13 ವರ್ಷಗಳ ಕಾಲ ಶ್ರೀ ಅಪ್ಪಣ್ಣಾಚಾರ್ಯರ ಜೊತೆ ಭಿಕ್ಷಾಲಯದಲ್ಲಿ ವಾಸಿಸಿದ್ದರೆಂಬ ಸಂಗತಿ ಜನಜನಿತ ವಾದದ್ದು.
ತುಂಗಭದ್ರೆಯ ತಟದಲ್ಲಿರುವುದರಿಂದ ಭಿಕ್ಷಾಲಯವು ಪ್ರಾಕೃತಿಕ ಸೌಂದರ್ಯದ ನಡುವೆ ಸಮೃದ್ಧ ಹಸಿರು ಮತ್ತು ಶಾಂತಿಯುತ ವಾತಾವರಣವನ್ನೂ ಹೊಂದಿದೆ. ಅನೇಕ ಜನರು ಇಂದು ನಗರದ ಜೀವನದ ಗಡಿಬಿಡಿ ಮತ್ತು ಗಲಿಬಿಲಿಗಳಿಂದ ದೂರವಿರಲು ಈ ಸ್ಥಳಕ್ಕೆ ಬೇಟಿನೀಡುವರು. ಇಲ್ಲಿನ ಪ್ರಶಾಂತ ಪರಿಸರದಲ್ಲಿ ಧ್ಯಾನಿಸುವ ಅವರು ತಮ್ಮೊಳಗಿನ ಅಸ್ತಿತ್ವದ ಸಂಪರ್ಕವನ್ನು ಸಾಧಿಸುವರಲ್ಲದೇ ಅವರ ಮನಸ್ಸು ಪುನಶ್ಚೇತನಗೊಳ್ಳುವುದು.
ಇತ್ತೀಚಿನ ದಿನಗಳಲ್ಲಿ ಭಿಕ್ಷಾಲಯವು ಕುಟುಂಬ ಸಮೇತರಾಗಿ ಬಂದು ಅಮೂಲ್ಯ ಕ್ಷಣಗಳನ್ನು ಕಳೆಯುವ ನೆಚ್ಚಿನ ಪಿಕ್ನಿಕ್ ತಾಣವಾಗಿ ಮಾರ್ಪಟ್ಟಿದೆ. ಪ್ರವಾಸಿಗರು ಮತ್ತು ಸ್ಥಳೀಯರು ಏಕದಿನದ ಭೇಟಿಗಾಗಿ ಇಲ್ಲಿಗೆ ತೆರಳಬಹುದು.