ತಿರುವೆರಪ್ಪು ದೇವಾಲಯ ಕೇರಳಾದಲ್ಲಿರುವ ಪ್ರಮುಖ ದೇವಾಲಯಗಳಲ್ಲೊಂದು. ಇದು ಕೃಷ್ಣನ ದೇವಾಲಯ. ಕೊಟ್ಟಾಯಂನಿಂದ 7 ಕಿ.ಮೀ. ದೂರದಲ್ಲಿ ಹರಿಯುವ ಮೀನಾಕ್ಷಿ ನದಿಯ ದಂಡೆಯಲ್ಲಿದೆ. ಈ ದೇವಾಲಯ ಸುಮಾರು 1500 ವರ್ಷಗಳಷ್ಟು ಹಳೆಯದು ಎಂದು ಲೆಕ್ಕಾಚಾರ ಹಾಕಲಾಗಿದೆ. ಅನೇಕ ಮೇಧಾವಿಗಳು ಈ ದೇವಾಲಯದ ಆಡಳಿತ ವರ್ಗದಲ್ಲಿದ್ದಾರೆ. ದೇವಾಲಯದ ಎಲ್ಲಾ ಕೆಲಸಕಾರ್ಯಗಳನ್ನು ಅವರು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ತಿರುವೆರಪ್ಪು ದೇವಾಲಯದಲ್ಲಿರುವ ಮೂರ್ತಿಗೆ ನಾಲ್ಕು ಕೈಗಳಿವೆ. ಈ ವಿಗ್ರಹವನ್ನು ಉರುಳಿಯಲ್ಲಿಡಲಾಗಿದೆ.
ಈ ದೇವಾಲಯ ಅನೇಕ ವಿಚಾರಗಳಲ್ಲಿ ವಿಶೇಷತೆಗಳನ್ನು ಹೊಂದಿದೆ. ಮೊದಲನೆಯದಾಗಿ ಸ್ಚಲ್ಪ ಸಮಯದಲ್ಲೇ ತಯಾರಿಸುವ ಪಾಯಸ. ಎರಡನೆಯದಾಗಿ ದೇವಾಲಯದ ಬಾಗಿಲನ್ನು ತೆರೆಯಲು ಇಲ್ಲಿನ ಪ್ರಮುಖ ಪೂಜಾರಿಗೆ ಒಂದು ಗರಗಸ ಹಾಗೂ ಪ್ರಮುಖ ದ್ವಾರದ ಬೀಗದ ಕೈ ನೀಡಲಾಗಿರುತ್ತದೆ. ಒಂದು ವೇಳೆ ದೇವಾಲಯದ ಬಾಗಿಲು ತೆರೆಯಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ಗರಗಸ ಬಳಸಿ ಬಾಗಿಲನ್ನು ಮುರಿಯುವ ಅಧಿಕಾರ ಅವರಿಗೆ ನೀಡಲಾಗಿರುತ್ತದೆ. ಮೂರನೆಯದಾಗಿ ಗ್ರಹಣದ ಇಡೀ ದಿನ ಈ ದೇವಾಲಯ ಬಾಗಿಲು ತೆರೆದಿರುತ್ತದೆ. ನಾಲ್ಕನೆಯದಾಗಿ ಈ ದೇವಾಲಯ ಭೂತನಾಥ ಎಂಬ ಪವಿತ್ರ ಸ್ಥಳವನ್ನು ಹೊಂದಿರುವುದಲ್ಲದೆ ಗಣಪತಿ, ಸುಬ್ರಹ್ಮಣ್ಯ, ಶಿವಾ, ಭಗವತಿಯರ ದೇವಾಲಯ ಹಾಗೂ ಹೊರ ಭಾಗದಲ್ಲಿ ಯಕ್ಷೀಯ ದೇವಾಲಯವವೂ ಇದೆ.


Click it and Unblock the Notifications