ಈಗಿನ ತ್ರಿ ಈಡಿಯಟ್ಸ್ ನ ರಾಂಚೋಡದಾಸನನ್ನು ನೆನೆಪಿಸುವಂತಹ ಈ ಡಕೊರ್ ದ ರಾಂಚೋದೈ ದೇವಸ್ಥಾನವು ಖೇಡಾ ಜಿಲ್ಲೆಯಲ್ಲಿರುವ ಗೋಮತಿ ಸರೋವರದ ತೀರದಲ್ಲಿದೆ. ಕೋಟೆಯ ಮಧ್ಯದಲ್ಲಿರುವ ಈ ದೇವಾಲಯವು 27 ಮೀ ಎತ್ತರದ ಕೇಂದ್ರ ಗುಮ್ಮಟವನ್ನೊಳಗೊಂಡು ಇತರ ಎಂಟು ಗುಮ್ಮಟಗಳನ್ನು ಹೊಂದಿದೆ. ಖೇಡಾ ಜಿಲ್ಲೆಯಲ್ಲೇ ಅತಿ ಎತ್ತರದ ದೇವಾಲಯವಾಗಿರುವ ಇದು ಬಂಗಾರದ ಕಲಶ ಮತ್ತು ರೇಷ್ಮೆಯ ದ್ವಜವನ್ನು ಹೊಂದಿದೆ.
ದೇವಾಲಯದ ವರಾಂಡಾದಲ್ಲಿ ಭಗವಾನ್ ಕೃಷ್ಣನ ಜೀವನದ ವಿವಿಧ ಘಟನೆಗಳನ್ನು ನಿರೂಪಿಸುವ ವರ್ಣಚಿತ್ರಗಳಿದ್ದು, ಗರ್ಭಗುಡಿಯಲ್ಲಿನ ಮೂರ್ತಿಯು ಅತ್ಯಾಕರ್ಷಕವಾಗಿದೆ. ಕಪ್ಪು ಓರೆಕಲ್ಲಿನಿಂದ ತಯಾರಿಸಿದ ಕೃಷ್ಣನಿಗೆ ಅದ್ದೂರಿಯಾಗಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳು, ಹೊಳೆಯುವ ಚಿತ್ತಾರದ ಬಟ್ಟೆಗಳನ್ನು ಧರಿಸಿರುತ್ತಿದ್ದು ನೋಡಿಗರ ಕಣ್ಣಿಗೆ ಹಬ್ಬ ಉಂಟುಮಾಡುತ್ತವೆ. ಭಗವಂತನಿಗೆ ಧರಿಸಿರುವ ಸಮೃದ್ಧ ಕೆತ್ತನೆಯ ಮರದ ಶಲ್ಯವನ್ನು ಬರೋಡದ ಮಹಾರಾಜ ಗಾಯಕ್ವಾಡ್ ನು ಕೊಡುಗೆಯಾಗಿ ನೀಡಿದ್ದನಂತೆ.
ಅಂದಹಾಗೆ ಈ ರಾಂಚೋದೈ ದೇವಾಲಯವನ್ನು ಕ್ರಿ.ಶ. 1772 ರಲ್ಲಿ ಗೋಪಾಲ್ ಜಗನ್ನಾಥ ಅಂಬೇಡ್ಕರ್ ನಿರ್ಮಿಸಿದನು . ಇದು ಬೆಳಿಗ್ಗೆ 6 ರಿಂದ 12 ರವರೆಗೆ ಮತ್ತು ಸಂಜೆ 4 ರಿಂದ 7 ವರೆಗೆ ಸಾರ್ವಜನಿಕ ದರ್ಶನಕ್ಕಾಗಿ ತೆರೆದಿರುತ್ತದೆ