ಪ್ರವಾಸಿಗರು ಹಾಸನ ಜಿಲ್ಲೆಗೆ ಭೇಟಿಕೊಟ್ಟಾಗ ಇಲ್ಲಿಗೆ ಸಮೀಪದ ನುಗ್ಗೆಹಳ್ಳಿಗೆ ಭೇಟಿ ಕೊಡಬೇಕು. ಈ ಊರಿನಲ್ಲಿ ಬಳಪದ ಕಲ್ಲು ಅಥವಾ ಸೋಪ್ ಸ್ಟೋನ್ ಅಥವಾ ಕ್ಲೋರಿಟಿಕ್ ಶಿಸ್ಟ್ ಎಂದು ಸಹಾ ಕರೆಯಲಾಗುವ ಕಲ್ಲುಗಳಿಂದ ನಿರ್ಮಿಸಲಾದ ಪ್ರಸಿದ್ಧ ಲಕ್ಷ್ಮಿ ನಾರಾಯಣ ದೇವಾಲಯ ಮತ್ತು ಸದಾಶಿವ ದೇವಾಲಯಗಳಿವೆ.
ಈ ಊರಿಗೆ ನುಪ್ಪಳ್ಳಿ ಅಥವಾ ನುಗ್ಗು ಪಲ್ಲಿ ಎಂದು ಸಹಾ ಕರೆಯುತ್ತಾರೆ. ಇದು ಹಾಸನದಿಂದ 50 ಕಿ.ಮೀ ದೂರದಲ್ಲಿದ್ದು, ತಿಪಟೂರು – ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯಲ್ಲಿದೆ. ಈ ಎರಡು ದೇವಾಲಯಗಳನ್ನು ಹೊಯ್ಸಳರ ರಾಜ ವೀರ ಸೋಮೇಶ್ವರನ ಕಾಲದಲ್ಲಿದ್ದ ಸೇನಾಧಿಪತಿ ಬೊಮ್ಮಣ್ಣ ದಂಡನಾಯಕ ನಿರ್ಮಿಸಿದನಂತೆ.
ಲಕ್ಷ್ಮಿ ನರಸಿಂಹ ದೇವಾಲಯವು 1246ರಲ್ಲಿ ನಿರ್ಮಾಣಗೊಂಡಿದ್ದು ತ್ರಿಕೂಟ(ಮೂರು ಗೋಪುರ) ಗಳನ್ನು ಹೊಂದಿದೆ. ಈ ದೇವಾಲಯದ ಗೋಡೆಗಳಲ್ಲಿ ಹಲವು ಕೆತ್ತನೆಗಳನ್ನು, ವಿಮಾನ(ಪ್ರಾರ್ಥನೆಯ ಭವನ), ಬೃಹದಾಕಾರದ ಮಂಟಪವನ್ನು ಈ ದೇವಾಲಯದ ನಿರ್ಮಾಣದ ನಂತರ ನಿರ್ಮಿಸಲಾಗಿದೆ. ಈ ದೇವಾಲಯದ ಮಂಟಪವು ಮೂರು ಗರ್ಭಗುಡಿಗಳನ್ನು ಮತ್ತು 9 ದ್ವಾರಗಳನ್ನು ಹೊಂದಿದೆ. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ನಿಂತಿರುವ ಭಂಗಿಯಲ್ಲಿರುವ ಪಾರ್ವತಿ ದೇವಿಯ ಮೂರ್ತಿ.
ಸದಾಶಿವ ದೇವಾಲಯವು ಏಕಕೂಟ ವಾಸ್ತು ಶೈಲಿಯಲ್ಲಿ ನಿರ್ಮಾಣವಾಗಿರುವ ದೇವಾಲಯವಾಗಿದ್ದು, ನಾಗರ ಶೈಲಿಯ ಗೋಪುರವನ್ನು ಹೊಂದಿದೆ. ಈ ದೇವಾಲಯದ ಗರ್ಭ ಗುಡಿಯಲ್ಲಿ ಬೃಹದಾಕಾರದ ಶಿವಲಿಂಗವಿದೆ. ಗೋಡೆಯಲ್ಲಿ ಹಲವಾರು ಕಿಟಕಿಗಳನ್ನು ಹೊಂದಿರುವ ಕೋಣೆಯಲ್ಲಿ ಒಂದು ಸುಂದರ ನಂದಿ ವಿಗ್ರಹವನ್ನು ಇಲ್ಲಿ ಪ್ರತಿಷ್ಟಾಪಿಸಲಾಗಿದೆ. ಈ ಸ್ಥಳಕ್ಕೆ ಬರುವಾಗ ಪ್ರವಾಸಿಗರು ಎರಡು ಗಣಪತಿ ವಿಗ್ರಹಗಳನ್ನು ನೋಡುತ್ತಾರೆ. ಒಂದು ದೇವಿಯ ಮೂರ್ತಿಯಿರುವ ದೇವಾಲಯ ದ್ವಾರದ ಬಳಿಯಾದರೆ ಮತ್ತೊಂದು ಲಿಂಗವಿರುವ ಗರ್ಭಗುಡಿಯ ಹೊರಭಾಗದಲ್ಲಿ ಕಾಣಬಹುದು.