ತುಳಸಿ ಉದ್ಯಾನ ಹೆಸರೇ ಸೂಚಿಸುವಂತೆ ಒಂದು ಉದ್ಯಾನವನವಾಗಿದೆ. ಮಹಾಕಾವ್ಯ ರಾಮಚರಿತ ಮಾನಸ(ರಾಮಾಯಣವೆಂದೇ ಜನಪ್ರಿಯ) ರಚಿಸಿರುವ ಸಂತ ಕವಿ ತುಳಸಿ ದಾಸ ಅವರ ಸ್ಮರಣೆಗಾಗಿ ಈ ಉದ್ಯಾನವನ್ನು ನಿರ್ಮಿಸಲಾಗಿತ್ತು. ಉದ್ಯಾನದಲ್ಲಿ ಸುಂದರವಾಗಿ ಕೆತ್ತಲಾಗಿರುವ ಛಾವಣಿ ಅಡಿಯಲ್ಲಿ ತುಳಸಿದಾಸರ ಪ್ರತಿಮೆ ಸಹ ಇದೆ.
ಅಯೋಧ್ಯಾದ ಫೈಜಾಬಾದ್ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅಯೋಧ್ಯಾ ಬಸ್ ನಿಲ್ದಾಣ ಸಮೀಪವೇ ಈ ಉದ್ಯಾನವಿದೆ. ಇದನ್ನು ಮೊದಲು ಇಂಗ್ಲೆಂಡ್ ನ ರಾಣಿ ವಿಕ್ಟೋರಿಯಾ ಹೆಸರಿನಿಂದ ಕರೆಯಲಾಗುತ್ತಿತ್ತು. ಉದ್ಯಾನದಲ್ಲಿ ಆಕೆಯ ಪ್ರತಿಮೆಯೂ ಇದೆ. 1960ರಲ್ಲಿ ಇದಕ್ಕೆ ತುಳಸಿ ಉದ್ಯಾನವೆಂದು ಹೆಸರಿಡಲಾಯಿತು. ಪ್ರಸಕ್ತ ಉತ್ತರ ಪ್ರದೇಶ ಸರ್ಕಾರದ ಉದ್ಯಾನ ವಿಭಾಗವೂ ಈ ಉದ್ಯಾನದ ನಿರ್ವಹಣೆ ಮಾಡುತ್ತಿದೆ.