ಶಿವಾಲಯಂ ಅಥವಾ ಶ್ರೀ ರಾಜರಾಜೇಶ್ವರ ದೇವಸ್ಥಾನ ಯಾಣಮ್ ನ ಪ್ರಮುಖ ಧಾರ್ಮಿಕ ಆಕರ್ಷಣೆ. ಚಾಲುಕ್ಯ ದೊರೆ ರಾಜಾ ಮಹೇಂದ್ರವರ್ಮ 15ನೇ ಶತಮಾನದಲ್ಲಿ ಈ ದೇವಸ್ಥಾನವನ್ನು ಕಟ್ಟಿಸಿದ. ಆ ಕಾಲದ ಸುಶೋಭೀತ ಕೆತ್ತನೆಗಳಿಗೆ, ಈ ದೇವಸ್ಥಾನ ಗುರುತಿಸಲ್ಪಡುತ್ತದೆ. ಈ ದೇವಸ್ಥಾನ ಆತ್ರೇಯ ಗೋದಾವರಿ ನದಿ ಅಥವಾ ಕೊರಂಗಿ ನದಿಯ ದಂಡೆಯ ಮೇಲಿದೆ. ಕಲ್ಯಾಣೋತ್ಸವ ಮತ್ತು ರಥೋತ್ಸವಗಳು ಇಲ್ಲಿ ಆಚರಿಸಲ್ಪಡುವ ಪ್ರಮುಖ ಹಬ್ಬಗಳು. ಕಲ್ಯಾಣೋತ್ಸವವನ್ನು ಮಾಘ ಮಾಸದಲ್ಲಿ ಅಂದರೆ ಜನವರಿ-ಫೇಬ್ರವರಿ ತಿಂಗಳಲ್ಲಿ ಆಚರಿಸಲಾಗುತ್ತದೆ. ಶ್ರೀ ರಾಜರಾಜೇಶ್ವರ ದೇವರನ್ನು ಮದುಮಗನಂತೆ ಶೃಂಗರಿಸಿ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ರಥೋತ್ಸವವೂ ಕೂಡ ಆಚರಣೆಯ ಒಂದು ಭಾಗವಾಗಿದ್ದು, ರಥದಲ್ಲಿ ದೇವರನ್ನು ಕುಳ್ಳಿರಿಸಿ ಭಕ್ತರು ತೇರನ್ನು ಎಳೆಯುತ್ತಾರೆ.