ಸೋನಾನದಿ ಎಂಬುದು ರಾಮ್ಗಂಗಾ ನದಿಯ ಒಂದು ಉಪನದಿಯಾಗಿದೆ . ಸೋನಾನದಿ ವನ್ಯಧಾಮವು ಈ ಹೆಸರನ್ನು ಇಲ್ಲಿ ಹರಿಯುವ ಸೋನಾನದಿಯಿಂದ ಪಡೆದಿದೆ. ಈ ರಾಷ್ಟ್ರೀಯ ಉದ್ಯಾನವನಕ್ಕೆ ವಾಯುವ್ಯ ದಿಕ್ಕಿನಿಂದ ಪ್ರವೇಶಿಸುವ ಈ ನದಿಯು ಇಲ್ಲಿ ರಾಮ್ಗಂಗಾ ನದಿಯೊಂದಿಗೆ ಸಂಗಮವಾಗುತ್ತದೆ. ಈ ನದಿಯನ್ನು "ಚಿನ್ನದ ನದಿ" ಎಂದು...
ಸೋನಾನದಿ ವನ್ಯಜೀವಿಧಾಮವು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಗಡಿಗುಂಟ ನೆಲೆಸಿದೆ. ಇದು ಸುಮಾರು 301.18 ಚ.ಕಿ.ಮೀ ವಿಸ್ತೀರ್ಣದಲ್ಲಿ ನೆಲೆಗೊಂಡಿದೆ. ಈ ವನ್ಯಧಾಮವು ಏಶಿಯಾದ ಹುಲಿ ಮತ್ತು ಆನೆಗಳಿಗೆ ಹೆಸರುವಾಸಿಯಾಗಿದೆ. ಇದೊಂದು ಸಾಮಾನ್ಯವಾದ ಉತ್ತರ ಭಾರತದ ಮಳೆಕಾಡಾಗಿದ್ದು, ಸೋನಾನದಿಯಿಂದಾಗಿ ಈ ಹೆಸರನ್ನು ಪಡೆದಿದೆ....
ಸೀತಾಬನಿ ಎಂಬುದು ಒಂದು ಅರಣ್ಯ ಪ್ರದೇಶವಾಗಿದ್ದು, ಪಕ್ಷಿ ವೀಕ್ಷಣೆಗೆ ಹೇಳಿ ಮಾಡಿಸಿದ ತಾಣವಾಗಿದೆ. ಅಲ್ಲದೆ ಇದು ಈ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರು ಕಾಲ್ನಡಿಗೆಯಲ್ಲಿ ಸುತ್ತಾಡಲು ಇರುವ ಏಕೈಕ ಸ್ಥಳವಾಗಿದೆ. ಈ ಸ್ಥಳದಲ್ಲಿ ಪ್ರವಾಸಿಗರು ಒಂದು ನದಿ ಹಾಗು ವಾಲ್ಮೀಕಿ ದೇವಾಲಯವನ್ನು ನೋಡಬಹುದು. ನದಿ ದಂಡೆಯಲ್ಲಿ...
ಸೀತಾಬನಿ ದೇವಾಲಯವು ರಾಮ್ನಗರದಿಂದ 20 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಸೀತಾದೇವಿಗಾಗಿ ನಿರ್ಮಿಸಲಾದ ದೇವಾಲಯವಾಗಿದೆ. ದಂತಕಥೆಗಳ ಪ್ರಕಾರ, ಸೀತಾದೇವಿಯು ಈ ಸ್ಥಳದಲ್ಲಿ ಭೂದೇವಿಯೊಂದಿಗೆ ಲೀನವಾದಳೆಂದು ಹೇಳಲಾಗುತ್ತದೆ. ರಾಮನವಮಿಯ ಶುಭ ಸಂದರ್ಭದಲ್ಲಿ ಪ್ರತಿ ವರ್ಷವು ಇಲ್ಲಿ ಒಂದು ಜಾತ್ರೆಯನ್ನು...
ಸೊಟ್ಸ್ ಎಂಬುವು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಹರಿಯುವ ತಾತ್ಕಾಲಿಕ ಝರಿಗಳಾಗಿವೆ. ಇವು ಕೇವಲ ಕೆಲವು ಋತುಗಳಲ್ಲಿ ಮಾತ್ರ ಹರಿಯುತ್ತವೆ. ಅಲ್ಲದೆ ಇವು ಇಲ್ಲಿನ ಪ್ರಾಣಿಗಳಿಗೆ ಕುಡಿಯುವ ನೀರಿನ ಆಕರಗಳಾಗಿಯೂ ಸಹ ಸೇವೆ ಸಲ್ಲಿಸುತ್ತವೆ. ಈ ಝರಿಗಳು ಈ ರಾಷ್ಟ್ರೀಯ ಉದ್ಯಾನವನದ ಜೈವಿಕ ಪರಿಸರದ ಮೇಲೆ ಭಾರಿ ಪ್ರಭಾವವನ್ನು...
ಗರಿಜ ದೇವಾಲಯವು ಒಂದು ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದ್ದು, ಒಂದು ದೊಡ್ಡ ಹೆಬ್ಬಂಡೆಯ ಮೇಲೆ ನೆಲೆಗೊಂಡಿದೆ. ಇದು ರಾಮ್ನಗರದಿಂದ 14 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ರಾಣಿಖೇತ್ ಗೆ ಹೋಗುವ ಹಾದಿಯಲ್ಲಿ ಇಲ್ಲಿಗೆ ಭೇಟಿಕೊಡಬಹುದು. ಕಾರ್ತಿಕ ಪೌರ್ಣಿಮೆಯ ತಿಂಗಳಲ್ಲಿ ಇಲ್ಲಿ ಒಂದು ವಾರ್ಷಿಕ ಜಾತ್ರೆಯನ್ನು...
ಡಿಯೋರಿಯಾ ತಾಲ್ ರುದ್ರಪ್ರಯಾಗದಿಂದ 49 ಕಿ.ಮೀ ದೂರದಲ್ಲಿರುವ ಒಂದು ಸುಂದರ ಪ್ರವಾಸಿ ತಾಣವಾಗಿದೆ. ಇದು ಸಮೃದ್ಧ ಹಸಿರು ಕಾಡುಗಳಿಂದ ಆವೃತವಾಗಿರುವ ಮೋಡಿಮಾಡುವಂತಹ ಕೆರೆ. ಈ ಸರೋವರವು ಗಂಗೋತ್ರಿ, ಬದರಿನಾಥ್, ಕೇದಾರ್ನಾಥ್, ಯಮುನೋತ್ರಿ ಮತ್ತು ನೀಲಕಂಠ ಶಿಖರಗಳನ್ನು ಒಳಗೊಂಡಿರುವ ಚೌಖಂಬಾ ಶ್ರೇಣಿಯ ಸ್ಪಷ್ಟ ಪ್ರತಿಬಿಂಬವನ್ನು...
ಧಿಕಲ ಎನ್ನುವುದು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಪಟ್ಲಿ ಡುನ್ ಕಣಿವೆಯಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಈ ಸ್ಥಳವು ಸುಮಾರು 100 ವರ್ಷ ಹಳೆಯದಾದ ಒಂದು ವಿಶ್ರಾಂತಿಗೃಹವನ್ನು ಹೊಂದಿದೆ. ಪ್ರವಾಸಿಗರು ಇಲ್ಲಿ ವಿಶ್ರಾಂತಿಯನ್ನು ಪಡೆಯಬಹುದು. ಪ್ರವಾಸಿಗರು ಇಲ್ಲಿ 'ಕಂಡ' ಪ್ರಪಾತದ ಹಿನ್ನಲೆಯಲ್ಲಿ ಕಂಗೊಳಿಸುವ...
ಮಂಡಲ್ ನದಿಯು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಕ್ಕೆ ಈಶಾನ್ಯ ಭಾಗದಲ್ಲಿ ಪ್ರಾಕೃತಿಕ ಎಲ್ಲೆಯಾಗಿ ಹರಿಯುತ್ತಿದೆ. ಈ ನದಿಯು ಚಮೋಲಿ ಜಿಲ್ಲೆಯ ಟಲ್ಲ ಸಲನ್ನಲ್ಲಿ ಉಗಮವಾಗುತ್ತದೆ. ಮಂಡಲ್ ನದಿಯು ಡೊಮುಂಡದಲ್ಲಿ ರಾಮ್ಗಂಗಾ ನದಿಗೆ ಸೇರುವ ಮುನ್ನ 32 ಕಿ.ಮೀ ಗಳಷ್ಟು ದೂರವನ್ನು ಕ್ರಮಿಸುತ್ತದೆ. ಇದರ ಜೊತೆಗೆ ಈ ನದಿಯು...
ಮದ್ ಮಹೇಶ್ವರ ದೇವಾಲಯ, ಮದ್ ಮಹೇಶ್ವರ ನದಿಯ ಮೂಲದ ಹತ್ತಿರದಲ್ಲಿದೆ. ಸಮುದ್ರ ಮಟ್ಟದಿಂದ 3289 ಮೀಟರ್ ಎತ್ತರದಲ್ಲಿರುವ ಈ ದೇವಾಲಯವನ್ನು ಎರಡನೇ ಕೇದಾರ ಎಂದು ಪರಿಗಣಿಸಲಾಗಿದೆ. ಕೆಲವು ದಂತಕಥೆಗಳ ಪ್ರಕಾರ, ಶಿವ ಪಾಂಡವರನ್ನು ಕಾಣಲು ಇಷ್ಟಪಡದೇ ಅವರಿಂದ ತಪ್ಪಿಸಿಕೊಳ್ಳಲು, ಕೇದಾರ್ನಾಥ್ ನಲ್ಲಿ ತಾನೇ ಸ್ವತಃ ಮಣ್ಣಿನಲ್ಲಿ...
ಮಾ ಹರಿಯಾಲಿ ದೇವಿ ದೇವಾಲಯ ರುದ್ರಪ್ರಯಾಗ ಪಟ್ಟಣದಿಂದ 37 ಕಿಮೀ ದೂರದಲ್ಲಿದೆ. ಇದೊಂದು ಜನಪ್ರಿಯ ಧಾರ್ಮಿಕ ಸ್ಥಳವಾಗಿದೆ. ಸಮುದ್ರ ಮಟ್ಟದಿಂದ 1400 ಮೀಟರ್ ಎತ್ತರದಲ್ಲಿರುವ ಈ ಸ್ಥಳ, ಬೃಹತ್ ಹಿಮಾಲಯ ಶ್ರೇಣಿಗಳಿಂದ ಸುತ್ತುವರೆದಿದೆ. ಈ ದೇವಾಲಯದಲ್ಲಿ ಸೀತಾ ಮಾತಾ, ಬಾಲಾ ದೇವಿ ಮತ್ತು ವೈಷ್ಣೋ ದೇವಿ ಯರನ್ನು ಪೂಜಿಸಲಾಗುತ್ತದೆ....
ಪ್ರವಾಸಿಗರ ವಲಯದಲ್ಲಿ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಯುವ ಚಟುವಟಿಕೆಗಳಲ್ಲಿ ಮೀನುಗಾರಿಕೆಯು ಸಹ ಒಂದು ಪ್ರಸಿದ್ಧ ಚಟುವಟಿಕೆಯಾಗಿದೆ. ಕೋಸಿ ನದಿ ಮತ್ತು ರಾಮ್ಗಂಗಾ ನದಿಗಳು ಯಥೇಚ್ಛವಾಗಿ ಮಹಷೀರ್ ಮೀನುಗಳನ್ನು ಹೊಂದಿದ್ದು, ಈ ಉದ್ಯಾನವನದಲ್ಲಿ ಮೀನುಗಾರಿಕೆಗೆ ಹೇಳಿ ಮಾಡಿಸಿದ ತಾಣಗಳಾಗಿವೆ. ಪ್ರವಾಸಿಗರು...
ಉಖಿಮಠ್, ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಒಂದು ಪವಿತ್ರ ಸ್ಥಳ. ಬಾಣಾಸುರನ ಮಗಳಾದ ಉಷಾಳಿಂದ ಈ ಪ್ರದೇಶಕ್ಕೆ ಈ ಹೆಸರು ಬಂದಿತೆಂದು ನಂಬಲಾಗಿದೆ. ಈ ಸ್ಥಳದಲ್ಲಿ ಉಷಾ, ಶಿವ, ಅನಿರುದ್ದ, ಪಾರ್ವತಿ ಮತ್ತು ಮಂದಾತಾ ಮೊದಲಾದ ಹಿಂದೂ ದೇವ ಮತ್ತು ದೇವತೆಗಳನ್ನು ಪೂಜಿಸಲಾಗುವ ಹಲವಾರು ದೇವಾಲಯಗಳನ್ನು ಕಾಣಬಹುದು. ಈ ಸ್ಥಳದ...
ಆನೆ ಸವಾರಿಯು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ದೊರೆಯುವ ಜೀವನ ಪರ್ಯಂತ ಮರೆಯಲಾಗದ ಅನುಭವವಾಗಿದೆ. ಈ ಸವಾರಿಯು ಪ್ರವಾಸಿಗರನ್ನು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಕೋರ್ ಮತ್ತು ಬಫ್ಫರ್ ವಲಯಗಳಿಗೆ ಕರೆದೊಯ್ಯುತ್ತದೆ. ಅಲ್ಲಿ ಪ್ರವಾಸಿಗರು ಕಾಡಿನ ಅನುಪಮವಾದ ಪ್ರಾಣಿ ಸಂಪತ್ತನ್ನು ನೋಡಬಹುದು. ಈ ಸಫಾರಿಗಾಗಿ ಪಳಗಿಸಿದ...
ಇಂದ್ರಸಾನಿ ಮಾನಸ ದೇವಿ ದೇವಾಲಯ ಕಂದಲಿ ಪತ್ತಿ/ಪಟ್ಟಿ ಹಳ್ಳಿಯಲ್ಲಿರುವ ಪ್ರಸಿದ್ಧ ಧಾರ್ಮಿಕ ಸೈಟ್ ಆಗಿದೆ. ಪುರಾಣದ ಪ್ರಕಾರ, ಇದು ಆದಿ ಶಂಕರಾಚಾರ್ಯರರ ಕಾಲದಲ್ಲಿ ನಿರ್ಮಿಸಲಾದ ಪ್ರಾಚೀನ ದೇವಾಲಯ. ಇಂದ್ರಸಾನಿ ಮಾನಸ ದೇವಿ ದೇವಾಲಯದಲ್ಲಿ ಹಾವುಗಳ ದೇವತೆ ಮಾನಸ ದೇವಿಯನ್ನು ಪೂಜಿಸಲಾಗುತ್ತದೆ. ರುದ್ರಪ್ರಯಾಗ ಪಟ್ಟಣದಿಂದ 6 ಕಿ....