ಸಾಯಿ ಬಾಬಾ ರವರ ಜೀವನಕ್ಕೆ ಅತ್ಯಂತ ಮಹತ್ವದ ಸ್ಥಳವಾಗಿರುವುದು ಚಾವಡಿ. ಶಿರಡಿಯಲ್ಲಿರುವ ಚಾವಡಿಯು ಬಾಬಾ ರವರು ತಮ್ಮ ಕೊನೆಯ ಹಲವು ಪ್ರಮುಖ ಸಮಯವನ್ನು ಕಳೆದ ಸ್ಥಳವಾಗಿದೆ. ಅವರನ್ನು ದ್ವಾರಕಾಮಾಯಿ ನಿಂದ ಚಾವಡಿಯವರೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತಿತ್ತು.
ಅವರ ಮೆರವಣಿಗೆಯನ್ನು ಕರೆದೊಯ್ಯುವ ಆಚರಣೆಯನ್ನು ಅದೇ ಮಾರ್ಗದಲ್ಲಿ ಈಗಲೂ ಪ್ರತೀ ಗುರುವಾರದಂದು ನಡೆಸಲಾಗುತ್ತದೆ. ಚಾವಡಿಯನ್ನು ಎರಡು ಭಾಗವಾಗಿ ವಿಂಗಡಿಸಲಾಗಿದ್ದು ಅದರ ಒಂದು ಭಾಗವು ಬಾಬಾರವರ ದೊಡ್ಡದಾದ ಕಲಾಕೃತಿಯನ್ನು ಮಾತ್ರವಲ್ಲದೆ ಬಾಬಾರವರಿಗೆ ಸೇರಿದ ಮರದ ಹಾಸಿಗೆ ಮತ್ತು ಶ್ವೇತವರ್ಣದ ಕುರ್ಸಿಯನ್ನೂ ಹೊಂದಿದೆ.


Click it and Unblock the Notifications