ಶಿರಡಿಯ ಸಮೀಪದಲ್ಲಿ ಇರುವ ಒಂದು ಪುಣ್ಯ ಸ್ಥಳ ಗುರುಸ್ಥಾನ. ಸಾಯಿ ಬಾಬಾರವರು 16 ವರ್ಷದವರಿದ್ದಾಗ ಇಡೀ ಜಗತ್ತಿಗೆ ಮೊದಲಬಾರಿಗೆ ಒಂದು ಬೇವಿನ ಮರದಡಿಯಲ್ಲಿ ಕಾಣಿಸಿಕೊಂಡರು. ಈ ವೃಕ್ಷವನ್ನು ಮಾರ್ಗೋಸ ಎಂದೂ ಮತ್ತು ಸ್ಥಳವು ಗುರುಸ್ಥಾನವೆಂದು ಜನಪ್ರಿಯವಾಯಿತು.
ಸಾಯಿ ಬಾಬಾರವರ ಭಕ್ತರ ನಂಬಿಕೆಯ ಪ್ರಕಾರ, ಇಲ್ಲಿ ಯಾರೇ ಒಂದು ಆಗರಬತ್ತಿಯನ್ನು ಹಚ್ಚಿದರೆ ಅವರ ಯಾವುದೇ ಕಷ್ಟಕಾರ್ಪಣ್ಯಗಳು ಅವರಿಂದ ದೂರವಾಗುತ್ತವೆ. ಈ ಗುರುಸ್ಥಾನದಲ್ಲೊಂದು ಸುರಕ್ಷಿತ ಸ್ಥಳವಿದ್ದು ಅಲ್ಲಿ ಬಾಬಾರ ಬೃಹತ್ ಕಲಾಕೃತಿಯನ್ನು ಇರಿಸಲಾಗಿದೆ.
ಭಕ್ತರು ಮುಂಜಾನೆ 5 ಘಂಟೆಯಿಂದ ರಾತ್ರಿ 10 ಘಂಟೆಯವರೆಗೆ ಈ ಸ್ಥಳಕ್ಕೆ ಭೇಟಿ ನೀಡಬಹುದು.