ಚೌಕಂಡಿ ಸ್ತೂಪವು ವಾರಣಾಸಿಯಿಂದ 13 ಕಿ ಮೀ ಅಂತರದಲ್ಲಿರುವ ಸಾರನಾಥದಲ್ಲಿದೆ. ಚೌಕಂಡಿ ಬೌದ್ಧ ಜನಾಂಗದವರಿಗೆ ಪೂಜ್ಯನೀಯ ಸ್ಥಳವಾಗಿದೆ. ಈ ಸ್ತೂಪವು ಬುದ್ಧನಿಗೆ ಸಂಬಂಧಿಸಿದ ಅವಶೇಷಗಳನ್ನು ಹೊಂದಿದೆ. ಬುದ್ಧನು ಬೋಧಗಯಾ ದಿಂದ ಸಾರನಾಥಕ್ಕೆ ಪ್ರಯಾಣಿಸುತ್ತಿದ್ದಾಗ ಇಲ್ಲಿ ಮೊದಲ ಭಾರಿಗೆ ಅನುಯಾಯಿಗಳನ್ನು ಭೇಟಿ ಆದನು ಆ ಸ್ಥಳವನ್ನು ಗುಪ್ತರು ತಮ್ಮ ಕಾಲದಲ್ಲಿ ಅಂದರೆ 4 ರಿಂದ 6 ನೇ ಶತಮಾನದಲ್ಲಿ ಇಲ್ಲಿ ಗೃಹಪಂಕ್ತಿ ಉಳ್ಳ ದೇವಾಲಯವನ್ನು ಕಟ್ಟಿದ್ದರು. ಮೊಘಲ್ ಚಕ್ರವರ್ತಿ ಹುಮಾಯೂನ್ ನ ಭೇಟಿಯ ಸ್ಮರಣಾರ್ಥವಾಗಿ ಅಷ್ಟಭುಜಾಕೃತಿಯ ಗೋಪುರವನ್ನು ನಂತರ ಸ್ತೂಪವಾಗಿ ಮಾರ್ಪಡಿಸಲಾಯಿತು.
ನೀವು ಚೌಕಂಡಿ ಸ್ತೂಪವನ್ನು ಭೇಟಿ ನೀಡಿದರೆ ಅಲ್ಲೇ ಹತ್ತಿರದಲ್ಲಿರುವ ಅಶೋಕ ಸ್ಥಂಬ, ದಮೇಖ ಸ್ತೂಪ, ಧರ್ಮಜಿಕ ಸ್ತೂಪ ಮತ್ತು ಧರ್ಮಚಕ್ರ ಸ್ತೂಪ, ಮುಳಗಂಧ ಕುಟಿ ದೇವಾಲಯವನ್ನು ಭೇಟಿ ನೀಡಬಹುದು.


Click it and Unblock the Notifications