ನಂದಿಕುಂಡ್, ಸಮೃದ್ಧ ಹಸಿರು ಹುಲ್ಲುಗಾವಲುಗಳ ನಡುವೆ ನೆಲೆಗೊಂಡಿದೆ ಮತ್ತು ಹಿಮಾಚ್ಛಾದಿತ ಶಿಖರಗಳು ಈ ಸುಂದರ ಸರೋವರದ ಸುತ್ತಲೂ ಆವರಿಸಿದೆ. ಈ ಸರೋವರ ಹಿಂದೂ ದೇವ, ಶಿವನಿಗೆ ಮೀಸಲಿರಿಸಲಾಗಿದೆ. ಶಿವನ ವಾಹನ ನಂದಿಯು ಇಲ್ಲಿ ನೀರು ಕುಡಿಯಲು ಬರುತ್ತಿತ್ತು ಎಂದು ಹೇಳಲಾಗುತ್ತದೆ.
ಈ ಸರೋವರದ ಪ್ರಮುಖ ಆಕರ್ಷಣೆಗಳಲ್ಲಿ ಒಂದು, ಸರೋವರದ ಹತ್ತಿರ ಕಂಡುಬರುವ ಒಂದು ತುಕ್ಕುಹಿಡಿದ ಕತ್ತಿ. ಒಂದು ಜನಪ್ರಿಯ ನಂಬಿಕೆ ಪ್ರಕಾರ, ಈ ಕತ್ತಿ, ಭಾರತೀಯ ಮಹಾಕಾವ್ಯ ಮಹಾಭಾರತದ ಪಾಂಡವರಿಗೆ ಸೇರಿದ್ದು ಎನ್ನಲಾಗುತ್ತದೆ. ಸರೋವರದಲ್ಲಿ, ಪ್ರವಾಸಿಗರೆಲ್ಲರೂ ಚೌಖಂಬಾ ಶಿಖರದ ಪ್ರತಿಫಲನವನ್ನು ನೋಡಬಹುದು. ಬೇಸಿಗೆ ಕಾಲದಲ್ಲಿ ಸರೋವರದ ನೀರು ವಿಪರೀತ ತಂಪಾಗಿರುತ್ತದೆ. ಮೇಲಾಗಿ, ಮದ್ಯಮೇಶ್ವರ ನದಿಯು ಗಂಗಾ ನದಿಯ ರೂಪವಾಗಿ ಈ ಸರೋವರದಲ್ಲಿ ಹರಿಯುತ್ತದೆ.