ಸತ್ಯ ಸಾಯಿಬಾಬಾರ ನಿರ್ದೇಶನದ ಮೇರೆಗೆ 1978 ರಲ್ಲಿ ಗ್ರಾಮ ಮಸೀದಿಯನ್ನು ಕಟ್ಟಲಾಯಿತು. ಮಸೀದಿ ನೆಲೆ ನಿಂತ ಸ್ಥಳದಲ್ಲಿ ಮುಸ್ಲಿಂ ಲಿಪಿಗಳಿದ್ದ ತಟ್ಟೆ ದೊರಕಿತ್ತು. ಅದರಲ್ಲಿ ಹೇಳಲಾದ ಪ್ರಕಾರ ಆ ತಟ್ಟೆ ದೊರಕಿದ ಸ್ಥಳದಲ್ಲಿ ಹಲವಾರು ದುರಾದೃಷ್ಟ ಘಟನೆಗಳು ಮತ್ತು ಆಕಸ್ಮಿಕಗಳು ನಂಭವಿಸುತ್ತಿದ್ದು ಅಲ್ಲಿ ಅಗೆಯಬೇಕಾಗಿ ಬರೆಯಲಾಗಿತ್ತು. ಬಾಬಾರ ನಿರ್ದೇಶನದಂತೆ ಅಲ್ಲಿ ಗ್ರಾಮಸ್ಥರೆಲ್ಲ ಸೇರಿ ಅಗೆದಾಗ ಶಾಸನಗಳು ದೊರಕಿದವು ಮತ್ತು ಆ ಸ್ಥಳದಲ್ಲಿ ಮಸೀದಿ ನಿರ್ಮಿಸಲಾಯಿತು. ಮಸೀದಿ ನಿರ್ಮಾಣದ ನಂತರ ಎಲ್ಲ ಅಪಘಾತಗಳೂ ನಿಂತವು.