ಸತ್ಯಭಾಮಾ ಮಂದಿರ ಸ್ಥಾಪನೆ ಮಾಡಿದ್ದು ಸತ್ಯ ಸಾಯಿಬಾಬಾ ಅವರ ಅಜ್ಜ ದಿವಂಗತ ಕೊಂಡಮರಾಜು. ಈ ದೇವಸ್ಥಾನ ಶ್ರೀಕೃಷ್ಣನ ಪತ್ನಿಯಾದ ಸತ್ಯಭಾಮೆಗೆ ಅರ್ಪಿತವಾಗಿದೆ. ದೇವಸ್ಥಾನವು ಶ್ರೀಕೃಷ್ಣನ ಹಲವಾರು ಚಿತ್ರಗಳನ್ನು ಹೊಂದಿದೆ. ದೇವಸ್ಥಾನದ ಗರ್ಭಗುಡಿಯಲ್ಲಿ ಮೂರಡಿ ಎತ್ತರದ ಸತ್ಯಭಾಮಾ ಮೂರ್ತಿಯಿದೆ.
ಇದು ಸತ್ಯಭಾಮೆಯ ಏಕೈಕ ಮಂದಿರ. ಕೊಂಡಮರಾಜು ತಮ್ಮ ಕನಸಿಲ್ಲಿ ಸತ್ಯಭಾಮೆ ತನ್ನ ಪತಿ ಪಾರಿಜಾತಾ ಹೂವು ತರಲು ಹೋದಾಗ ಕಾಯುತ್ತ ನಿಂತಿದ್ದ ದೃಶ್ಯವನ್ನು ಕಂಡರಂತೆ. ಶ್ರೀಕೃಷ್ಣ ಹಿಂತಿರುಗದೇ ಇದ್ದಾಗ ಆಕೆಯ ಕಣ್ಣುಗಳಿಂದ ನೀರು ಹನಿಗಳು ಒಂದೊಂದಾಗಿ ಬಿಳುತ್ತ ದೊಡ್ಡ ಬಿರುಗಾಳಿಯ ರೂಪವನ್ನೆ ಪಡೆಯುತ್ತವೆ. ನಂತರ ಸತ್ಯಭಾಮೆ ಕನಸಿನಲ್ಲಿ ಕೊಂಡಮರಾಜುವನ್ನು ಆಕೆಗೆ ನೆರಳು ಒದಗಿಸುವಂತೆ ಬೇಡಿಕೊಳ್ಳುತ್ತಾಳೆ. ಹೀಗಾಗಿ ಕೊಂಡಮರಾಜು ಸತ್ಯಭಾಮೆಯ ದೇವಸ್ಥಾನ ಕಟ್ಟಲು ಪ್ರಭಾವಿತಗೊಂಡರು.


Click it and Unblock the Notifications