ಪ್ರಭಾಸ್ ಗಿರಿ ಪಟ್ಟಣ ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿದೆ, ಇದು ಅಲಹಾಬಾದಿನಿಂದ ಅರವತ್ತು ಕಿಲೋಮೀಟರ್ ದೂರದಲ್ಲಿದೆ. ಈ ಪಟ್ಟಣವು ಜೈನ ಸಮುದಾಯದವರಿಗೆ ಪವಿತ್ರ ಸ್ಥಳವಾಗಿದ್ದು ವರ್ಷಾದ್ಯಂತ ಆ ಸಮುದಾಯದವರನ್ನು ಆಕರ್ಷಿಸುತ್ತದೆ. ಇಲ್ಲಿ ಜೈನ ಸಮುದಾಯದವರಿಗೆ ಅತಿ ಹೆಚ್ಚಿನ ಆಕರ್ಷಣೆಯೆಂದರೆ ಭಗವಾನ್ ಪದ್ಮ ಪ್ರಭು ದೇವಾಲಯ. ಇದನ್ನು ಭಗವಾನ್ ಪದ್ಮ ಪ್ರಭು ಹೆಸರಿನಲ್ಲಿ ನಿರ್ಮಿಸಲಾಗಿದೆ, ಇವರು ಆರನೇ ಜೈನ ತೀರ್ಥಂಕರರು. ಪ್ರಭಾಸ್ ಗಿರಿ ಹಿಂದೂ ಸಮದಾಯದವರಿಗೂ ಅತ್ಯಂತ ಪವಿತ್ರ ಸ್ಥಳ.
ಶ್ರೀಕೃಷ್ಣ ಪರಮಾತ್ಮನು ಭೂಮಿಯ ಮೇಲಿನ ತನ್ನ ಕೊನೆಯ ದಿನಗಳನ್ನು ಇಲ್ಲೇ ಕಳೆದದ್ದು ಎನ್ನುವುದು ನಂಬಿಕೆ. ಈ ಪಟ್ಟಣದಲ್ಲಿ ಹಲವು ಗುಹೆಗಳಿವೆ, ಈ ಗುಹೆಗಳ ಗೋಡೆಯಲ್ಲಿ ಬ್ರಾಹ್ಮಿ ಲಿಪಿಯಲ್ಲಿ ಬರೆಯಲಾಗಿದ್ದು ಇದರಿಂದಾಗಿ ಈ ಗುಹೆಯ ಇತಿಹಾಸ ತಿಳಿದುಕೊಳ್ಳಲು ಭಾರೀ ಕುತೂಹಲ ಮೂಡುತ್ತದೆ.
ಪ್ರವಾಸಿಗರು ಪ್ರಭಾಸ್ ಗಿರಿಗೆ ಭೇಟಿ ನೀಡುವ ಸಮಯದಲ್ಲಿ ಕರಾ ಮತ್ತು ಮಂಜಾನಪುರ ಸ್ಥಳವನ್ನೂ ಇದರೊಂದಿಗೆ ಬೆರೆತು ನೋಡಬಹುದಾಗಿದೆ. ಕರಾ ಹಲವು ಹಿಂದೂ ದೇವಾಲಯಗಳ ತವರುಮನೆ. ಪ್ರಮುಖವಾಗಿ ಶೀತ್ಲಾ ಮಾತಾ ದೇವಾಲಯ, ಚಿತ್ರಪಾಲ್ ಭೈರವ್ ದೇವಾಲಯ, ಹನುಮಾನ್ ದೇವಾಲಯ ಮತ್ತು ಕಾಳೇಶ್ವರ ಮಹಾದೇವ ದೇವಾಲಯ ಪ್ರಮುಖವಾದದ್ದು. ಶೀತ್ಲಾ ಮಾತಾ ದೇವಾಲಯ ಗಂಗಾನದಿಯ ತಟದಲ್ಲಿದೆ, ಈ ದೇವಾಲಯವನ್ನು ದೇವಿಯ 51 ಶಕ್ತಿಪೀಠಗಳಲ್ಲಿ ಒಂದೆಂದು ಹೇಳಲಾಗುತ್ತದೆ. ಮಂಜಾನಪುರ ಕೂಡಾ ಪವಿತ್ರ ಯಾತ್ರಾ ಸ್ಥಳಗಳಲ್ಲೊಂದಾಗಿದ್ದು ಇಲ್ಲಿ ಕಾಮಾಶೀನ್ ದೇವಿ ದೇವಾಲಯವಿದ್ದು ಪ್ರಮುಖ ಆಕರ್ಷಣೆಯಾಗಿದೆ.
ವಾತಾವರಣ
ಪ್ರಭಾಸ್ ಗಿರಿ ಉತ್ತರ ಪ್ರದೇಶದ ಇತರ ನಗರಗಳಂತೆಯೇ, ಮೂರೂ ಪ್ರಮುಖ ಬೇಸಿಗೆ, ಮಳೆಗಾಲ ಮತ್ತು ಚಳಿಗಾಲದ ವಾತಾವರಣಕ್ಕೆ ಸಾಕ್ಷಿಯಾಗುತ್ತದೆ.
ಪ್ರಭಾಸ್ ಗಿರಿಗೆ ಭೇಟಿ ನೀಡಲು ಯಾವ ಸಮಯ ಸೂಕ್ತ
ಧಾರ್ಮಿಕ ಕೇಂದ್ರವಾಗಿರುವುದುರಿಂದ ಪ್ರಭಾಸ್ ಗಿರಿ ಭಕ್ತಾದಿಗಳನ್ನು ವರ್ಷಾದ್ಯಂತ ಆಕರ್ಷಿಸುತ್ತದೆ. ಆದಾಗ್ಯೂ, ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಲು ಪ್ರಸಕ್ತ ಸಮಯ. ಯಾಕೆಂದರೆ ಈ ಅವಧಿಯಲ್ಲಿ ಆಹ್ಲಾದಕರವಾಗಿರುತ್ತದೆ.