ವಿನೋಭಾ ಮಂದಿರ ಒಂದು ಆಶ್ರಮವಾಗಿದ್ದು ಭಾರತದಲ್ಲಿ ಭೂದಾನ ಚಳುವಳಿಯನ್ನು ಹುಟ್ಟುಹಾಕಿದ ಮಹಾನ್ ಚೇತನ ವಿನೋಭಾ ಭಾವೆಗೆ ಅರ್ಪಿತವಾಗಿದೆ. ಆಶ್ರಮವೀಗ ಧಾರ್ಮಿಕತೆಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದ್ದು ದೇವಸ್ಥಾನವೆಂದೇ ಅರ್ಪಿತವಾಗಿದೆ. ಇದೇ ಪ್ರದೇಶದಲ್ಲಿ ಭೂದಾನ ಚಳುವಳಿಗೆ ನಾಂದಿ ಹಾಡಲಾಗಿದ್ದ ಕಾರಣ ವಿನೋಭಾ ಮಂದಿರ ಪೊಚಂಪಳ್ಳಿಯ ಜನರ ಪಾಲಿಗೆ ಹತ್ತಾರು ಮಹತ್ವಗಳನ್ನು ಹೊತ್ತುಕೊಂಡಿದೆ.
ದೇವಸ್ಥಾನದ ಒಳಗಡೆ ಆಚಾರ್ಯ ವಿನೋಭಾ ಬಾವೆ ಮತ್ತು ಮೊಟ್ಟಮೊದಲು ಬಡವರಿಗೆ ಭೂಮಿ ದಾನ ನೀಡಿದ ವೇದ್ರೆ ರಾಮಚಂದ್ರ ರೆಡ್ಡಿಯ ಮೂರ್ತಿಗಳಿವೆ. ಪೊಚಂಪಳ್ಳಿಯ ಜನರಿಗೆ ಈತ ಸುಮಾರು 250 ಎಕರೆ ಜಮೀನನ್ನು ನೀಡಿದ. ಆಚಾರ್ಯ ವಿನೋಭಾ ಭಾವೆಯ ನೆನಪುಗಳೊಂದಿಗೆ ಪ್ರವಾಸಿಗರು ಇಲ್ಲಿ ಸಂಚರಿಸಬಹುದು.
ದೇವಸ್ಥಾನದ ಹೊರಗಡೆಯಲ್ಲಿ, ದೇಶದಲ್ಲಿ ಹೊಸ ಶಕೆಯೊಂದನ್ನು ಹುಟ್ಟುಹಾಕಿದ ಚಳುವಳಿಯ ನೆನಪಿಗೆ ಭೂದಾನ ಸ್ತೂಪವನ್ನು ನಿಲ್ಲಿಸಲಾಗಿದೆ.