ಕಾರ್ಕಳದ ಸಮೀಪದಲ್ಲೇ ಇರುವ ಚತುರ್ಮುಖ ಬಸದಿಯು ಪ್ರವಾಸಿಗರು ಭೇಟಿ ನೀಡಲೇಬೇಕಾಂದತಹ ಪ್ರದೇಶವೆನ್ನಬಹುದು. ರಾಜ್ಯದಲ್ಲಿಯೇ ವಿಶಿಷ್ಟವಾಗಿರುವ ಈ ಜೈನ ಸ್ಮಾರಕ ಅತ್ಯಾಕರ್ಷಕವಾಗಿದೆ. ಬೆಟ್ಟದ ಶಿಖರದಲ್ಲಿರುವ ಈ ಬಸದಿಯನ್ನು ಕ್ರಿ.ಶ.1432ರಲ್ಲಿ ವೀರ ಪಾಂಡ್ಯದೇವ ರಾಜನು ನಿರ್ಮಿಸಿದನೆನ್ನಲಾಗಿದೆ. 108 ಕಂಬಗಳನ್ನು ಹೊಂದಿರುವ ಈ ಚತುರ್ಮುಖ ಜೈನ ಬಸದಿಯು ಪ್ರವಾಸಿಗರಿಗೆ ಕಾರ್ಕಳದ ಮುಖ್ಯ ಆಕರ್ಷಣೆ. ಜೈನ ಬಸದಿಗೆ ಹೊಳಪಿನ ಗ್ರಾನೈಟ್ ಕಲ್ಲುಗಳಿಂದ ನಿರ್ಮಿಸಲಾದ ಛಾವಣಿ ವಿಶಿಷ್ಟ ಮೆರಗು ನೀಡಿದೆ. ಈ ಬಸದಿಯ ಪ್ರವೇಶಕ್ಕೆ ನಾಲ್ಕು ದಿಕ್ಕುಗಳಲ್ಲಿ ದ್ವಾರಗಳಿರುವುದರಿಂದಲೇ ಇದಕ್ಕೆ ಚತುರ್ಮುಖ ಬಸದಿ ಎಂದು ಕರೆಯಿಸಿಕೊಳ್ಳುತ್ತಿದೆ.ಬಸದಿ ಪ್ರವೇಶಿಸುತ್ತಿದ್ದಂತೆಯೇ ಸುರ್ಯತಾ, ಮಲ್ಲಿ ಮತ್ತು ಅರಾ ಪ್ರತಿಮೆಗಳು ಪ್ರವಾಸಿಗರನ್ನು ಆಕರ್ಷಿಸಿಸುತ್ತವೆ. ಇನ್ನು ಬಸದಿಯ ಗರ್ಭಗುಡಿಯಲ್ಲಿರುವ ಯಕ್ಷಿ ಪದ್ಮಾವತಿ ಮತ್ತು 24 ತೀರ್ಥಂಕರ ನಿಂತ ಭಂಗಿಯಲ್ಲಿರುವ ಪ್ರತಿಮೆಗಳು ಇಂದಿಗೂ ಪ್ರವಾಸಿಗರನ್ನು ಧ್ಯಾನಾಸ್ಥಕರನ್ನಾಗಿಸಲು ಪ್ರೇರೇಪಿಸುತ್ತವೆ. ಇದಕ್ಕೆಂದೇ ಇಲ್ಲಿ ಹಲವಾರು ಪ್ರವಾಸಿಗರು ಧ್ಯಾನದ ವಿಶಿಷ್ಟ ಅನುಭವ ಪಡೆದುಕೊಳ್ಳುತ್ತಿರುವುದು ವಿಶೇಷ.