ಹಲವಾರು ರಾಜ್ಯ ಸಾರಿಗೆ ಮತ್ತು ಖಾಸಗಿ ಪ್ರವಾಸಿ ಬಸ್ಗಳು ರಸ್ತೆ ಮೂಲಕ ಮಹಾರಾಷ್ಟ್ರ ರಾಜ್ಯದ ಇತರ ಪ್ರಮುಖ ನಗರಗಳು ಮತ್ತು ಪಟ್ಟಣಗಳೊಂದಿಗೆ ಕರ್ಜಾತ್ ಪಟ್ಟಣವನ್ನು ಸಂಪರ್ಕಿಸುತ್ತವೆ. ಪ್ರತಿದಿನವು ಮುಂಬೈ, ಪುಣೆ, ಪನ್ವೇಲ್ ಮತ್ತು ಕರ್ಜಾತ್ ನಡುವೆ ನಿಯಮಿತವಾಗಿ ಬಸ್ ಸೌಲಭ್ಯಗಳಿವೆ. ಒಟ್ಟಿನಲ್ಲಿ ಪ್ರವಾಸಿಗರಿಗೆ ಉತ್ತಮವಾದ ಎಲ್ಲಾ ಬಗೆಯ ಸಾರಿಗೆ ವ್ಯವಸ್ಥೆಯೊಂದಿಗೆ ಕರ್ಜಾತ್ ಸ್ಥಳಕ್ಕೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ವಾತಾವರಣವನ್ನು ಇಷ್ಟಪಡುವ ಪ್ರವಾಸಿಗರು ಪ್ರತಿ ವರ್ಷ ಇಲ್ಲಿಗೆ ಬರುತ್ತಾರೆ. ಇಲ್ಲಿನ ಕಲ್ಲು ಬಂಡೆಗಳ ಕಡಿದಾದ ದಾರಿಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಅಲ್ಲದೆ, ಮಕ್ಕಳಿಗೆ ಇಷ್ಟವಾಗುವಂತಹ ವನ್ಯಮೃಗ ತಾಣವನ್ನೂ ಇಲ್ಲಿ ವೀಕ್ಷಿಸಬಹುದು. ಆದ್ದರಿಂದ ಪ್ರವಾಸಿಗರು ತಮ್ಮ ಅನುಕೂಲಕ್ಕೆ ತಕ್ಕಂತೆ ಅನುಕೂಲಕರ ವಾತಾವರಣವನ್ನು ಗೊತ್ತು ಮಾಡಿಕೊಂಡು ಕರ್ಜಾತ್ ಪಟ್ಟಣದಲ್ಲಿ ಕಾಲ ಕಳೆಯುವುದಕ್ಕೆ ಬರುವುದು ಒಳಿತು.