ಈ ಉದ್ಯಾನವನ ಭೀಮರಾವ್ ರಾಂಜಿ ಅಂಬೇಡ್ಕರ್ ಅವರ ನೆನಪಿನಲ್ಲಿ ನಿರ್ಮಿಸಲಾಗಿದ್ದು, ಇವರು ಭಾರತದ ಸಂವಿಧಾನ ಶಿಲ್ಪಿ. ಇವರು ದಲಿತ ಪಂಗಡದವರಾಗಿದ್ದು, ಅವರು ಇಂದಿಗೂ ರಚಿಸಿದ ಸಂವಿಧಾನ ಪರಿಗಣಿಸಲ್ಪಡುತ್ತದೆ. ಅವರ ಜೀವನ, ಸ್ಪೂರ್ಥಿ ಇಂದಿಗೂ ಭಾರತೀಯರಿಗೆ ಸ್ಪೂರ್ಥಿಯಾಗಿದೆ ಅದರಲ್ಲಿ ಪ್ರಮುಖವಾಗಿ ದಲಿತರಿಗೆ. ಇವರು ಉತ್ತರ ಪ್ರದೇಶದವರಾಗಿದ್ದು, ಈ ಮೊದಲು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಅವರು ತಮ್ಮ ಕಾರ್ಯಾಭಾರದಲ್ಲಿ ಅಂಬೇಡ್ಕರ್ ರವರ ಕುರಿತು ಹಲವು ಸ್ಮಾರಕಗಳನ್ನು ನಿರ್ಮಿಸಿದ್ದಾರೆ. ಅದರಲ್ಲಿ ಅಂಬೇಡ್ಕರ್ ಉದ್ಯಾನವನ ಕೂಡಾ ಒಂದು. ರಮ್ಯನೋಟದ ಈ ಉದ್ಯಾನವನ ಸ್ಥಳೀಯರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬೆಳಗ್ಗೆ ಮತ್ತು ಸಾಯಂಕಾಲ ಇಲ್ಲಿ ಸಾರ್ವಜನಿಕರು ವ್ಯಾಯಾಮ ಮಾಡುವುದನ್ನು ಮತ್ತು ಮಕ್ಕಳು ಆಟವಾಡುವುದನ್ನು ನೋಡಬಹುದು.